ದರೋಡೆಕೋರರಿಂದ ಜಪ್ತು ಮಾಡಿಕೊಳ್ಳಲಾದ ಚಿನ್ನಾಭರಣಗಳು. ಇಬ್ಬರು ಅಂತರ್ ರಾಜ್ಯ ದರೋಡೆಕೋರರ ಬಂಧನ, ಎಸ್ಪಿ ನಿಂಬರಗಿ.
Автор: ಹೊನ್ನ ಕಿರಣ ನ್ಯೂಸ್ ಕರ್ನಾಟಕ
Загружено: 2026-02-19
Просмотров: 50
Описание:
ವಿಜಯಪುರ : 19/02/2026
#exclusive #news #breakingnews #bijapur
ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷö್ಮಣ ನಿಂಬರಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದರೋಡೆಕೋರರಿಂದ ಜಪ್ತು ಮಾಡಿಕೊಳ್ಳಲಾದ ಚಿನ್ನಾಭರಣಗಳು
ವಿಜಯಪುರ : ಹಲಸಂಗಿ ಗ್ರಾಮದಲ್ಲಿ ಮೋಟಾರ್ ಸೈಕಲ್ ಮೇಲೆ ಬಂದು ಗನ್ ತೋರಿಸಿ ಬಂಗಾರ ಅಂಗಡಿಯನ್ನು ದೋಚಿದ್ದ ಇಬ್ಬರು ಅಂತಾರಾಜ್ಯ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತು ಮಾಡಿಕೊಂಡಿದ್ದಾರೆ.
ಬAಧಿತ ಆರೋಪಿಗಳನ್ನು ಮೂಲತ: ಸಂಖ ಗ್ರಾಮಕ್ಕೆ ಸೇರಿದರೂ ಹಾಲಿ ಜತ್ತ ನಿವಾಸಿ ಹಣಮಂತ ಮಲ್ಲಪ್ಪ ವಾಘೋಲಿ (೨೮), ಪುಣೆಯಲ್ಲಿ ನೆಲೆಸಿದ್ದ ಶಿವರಾಜ್ ಉರ್ಫ್ ಗೌಡಪ್ಪ ರಾವುಸಾಹೇಬ ನಾವಿ (೨೮) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ೨೦೫ ಗ್ರಾಂ ಚಿನ್ನಾಭರಣ, ೧ ಕೆಜಿ ಬೆಳ್ಳಿ ಸೇರಿದಂತೆ ೨೨ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯದ ವೇಳೆ ಬಳಸಿದ ಕಂಟ್ರಿಪಿಸ್ತೂಲ್ ಸೇರಿದಂತೆ ೩ ಕಂಟ್ರಿ ಪಿಸ್ತೂಲ್, ೨೬ ಜೀವಂತ ಗುಂಡು, ಒಂದು ಏರಗನ್, ಮೋಟಾರ್ ಸೈಕಲ್ ಜಪ್ತು ಮಾಡಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷö್ಮಣ ನಿಂಬರಗಿ ಮಾತನಾಡಿ, ಕಳೆದ ಜನವರಿ ೨೬ ರಂದು ಹಲಸಂಗಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸಾಲಬಾಧೆ ಹಾಗೂ ಷೋಕಿಆಸೆ, ದುಬಾರಿ ಲೈಫ್ ಸ್ಟಾಲ್ ಮೋಹದಿಂದಾಗಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಮೊದಲು ಸೊಲ್ಲಾಪೂರದ ಬಂಗಾರ ಅಂಗಡಿ ದೋಚುವ ಕಾರ್ಯಯೋಜನೆ ರೂಪಿಸಿದ್ದು, ನಂತರ ಅಲ್ಲಿ ಜನಸಂದಣಿ ಅಧಿಕವಾಗಿರುವುದರಿಂದ ಗಡಿ ಭಾಗದ ಹಲಸಂಗಿಯನ್ನು ಆಯ್ಕೆ ಮಾಡಿ ದರೋಡೆ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಗೋರಖ್ಪುರ ನಂಟು
ಬAಧಿತನಾಗಿರುವ ಆರೋಪಿಗಳು ಹಲಸಂಗಿ ಗ್ರಾಮದಲ್ಲಿ ಬಂಗಾರ ಅಂಗಡಿ ದೋಚುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಆರೋಪಿಗಳು ಉತ್ತರ ಪ್ರದೇಶದ ಗೋರಖಪುರ್ದಿಂದ ಪಿಸ್ತೂಲ್ ತಂದಿರುವ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಂಬರಗಿ ತಿಳಿಸಿದರು.
ಈಗಾಗಲೇ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಕಂಟ್ರಿ ಪಿಸ್ತೂಲ್ ಜೊತೆಗೆ ಉಳಿದ ಮೂರು ಕಂಟ್ರಿ ಪಿಸ್ತೂಲ್ಗಳನ್ನು ಸಹ ಜಪ್ತು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಎಎಸ್ಪಿ ರಾಮಗೌಡ ಹಟ್ಟಿ ನೇತೃತ್ವದಲ್ಲಿ ರಚನೆ ಮಾಡಲಾದ ಡಿವೈಎಸ್ಪಿಗಳಾದ ಸದಾಶಿವ ಕಟ್ಟಿಮನಿ, ಸುನೀಲ ಕಾಂಬಳೆ, ಪರಶುರಾಮ ಮನಗೂಳಿ, ಸೋಮೇಶ ಗೆಜ್ಜೆ, ರಾಕೇಶ ಬಗಲಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ನಿಂಬರಗಿ ತಿಳಿಸಿದರು.
೭೫ ಸಾವಿರ ಸಿಸಿಟಿವಿ ಅಳವಡಿಕೆಯ ಗುರಿ
ಸಿಸಿಟಿವಿ ಕ್ಯಾಮೆರಾ ಒಂದು ಸುರಕ್ಷತೆಯ ಸಾಧನ, ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟುವ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಿಂದೇಟು ಹಾಕುವುದು ಸಲ್ಲದು, ಹೀಗಾಗಿ ಸಿಸಿಟಿವಿ ಮಹತ್ವ ಬಗ್ಗೆ ಇಲಾಖೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ ಫಲವಾಗಿ ೨೫ ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಾಗಿವೆ, ಈಗ ಈ ಮನವರಿಕೆ ಮಾಡುವ ಕಾರ್ಯಕ್ಕೆ ಇನ್ನಷ್ಟೂ ಒತ್ತು ನೀಡಿ ೭೫ ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಾಗುವ ನಿಟ್ಟಿನಲ್ಲಿ ಇಲಾಖೆ ಮುಂದಾಗಲಿದೆ ಎಂದು ನಿಂಬರಗಿ ತಿಳಿಸಿದರು.
ಇನ್ನೂ ಗ್ರಾಮೀಣ ಭಾಗದಲ್ಲಿಯೂ ಸಹ ಆಯಕಟ್ಟಿನ ಸ್ಥಳ ಸೇರಿದಂತೆ ಮನೆಗಳಲ್ಲಿ ಸಿಸಿಕ್ಯಾಮೆರಾ ಅಳವಡಿಕೆ ನಿಟ್ಟಿನಲ್ಲಿ ಗ್ರಾ.ಪಂ. ಆಡಳಿತಕ್ಕೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಪ್ರಕಟಿಸಿದರು.
ಸಾರ್ವಜನಿಕರು ಸಹ ಯಾರಾದರೂ ಸಂಶಯಾಸ್ಪದವಾಗಿ ಮುಖ ಚಹರೆ ಮುಚ್ಚಿಕೊಂಡು ಹೆಲ್ಮೇಟ್, ಗ್ಲೌಸ್ ಧರಿಸಿದ ವ್ಯಕ್ತಿಗಳು ಕಂಡು ಬಂದರೆ ಇಲಾಖೆಗೆ ಮಾಹಿತಿ ನೀಡಬೇಕು ಎಂದು ನಿಂಬರಗಿ ಕೋರಿದರು.
Повторяем попытку...
Доступные форматы для скачивания:
Скачать видео
-
Информация по загрузке: