Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing /
Автор: Chandrashekara Navada
Загружено: 2022-03-14
Просмотров: 9902
Описание:
Yakshagana Kendra of Udupi founded by Dr Kota Shivarama Karanth, the present principal is Sri Bannanje Sanjiva Suvarna, Yakshagana Demo or Demonstration of Kodangi, Balagopala, Oddolaga, Various other roles, in Hangarkatte Yakshagana Kala Kendra on 13th March 2022, on the occasion of Installation Ceremony of Brahmavara taluk unit of Kannada Sahitya Parishath, See here in this Video Yakshagana Balagopala Dancing by him, Video of Chandrashekara Navada, @kcnavada.com
Introduction of Bannanje as hereunder
ಬನ್ನಂಜೆ ಸಂಜೀವ ಸುವರ್ಣ- ಸೆಪ್ಟಂಬರ್ 9-1955ರಂದು ಉಡುಪಿಯಲ್ಲಿ ಜನಿಸಿದರು. ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಸವಾಲನ್ನು ಎದುರಿಸುತ್ತಿದ್ದ ಸಾಮುದಾಯಿಕ ಹಿನ್ನೆಲೆಯಲ್ಲಿ ಹುಟ್ಟಿದ ಅವರು ಆಕಸ್ಮಿಕವಾಗಿ ಯಕ್ಷಗಾನದತ್ತ ಸೆಳೆಯಲ್ಪಟ್ಟರು. ಶಾಲಾಶಿಕ್ಷಣವನ್ನು ಅನಿವಾರ್ಯವಾಗಿ ಅರ್ಧಕ್ಕೇ ನಿಲ್ಲಿಸಬೇಕಾದ ಸ್ಥಿತಿಯಲ್ಲಿದ್ದ ಸಂಜೀವ ಸುವರ್ಣ, ಗುಂಡಿಬೈಲು ನಾರಾಯಣ ಶೆಟ್ಟರಲ್ಲಿ ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತರೆ, ಮೆಟ್ಕಲ್ ಕೃಷ್ಣಯ್ಯ ಶೆಟ್ಟರು, ಮಾರ್ಗೋಳಿ ಗೋವಿಂದ ಸೇರಗಾರ ಅವರಲ್ಲಿ ಯಕ್ಷಗಾನದ ಅನುಭವವನ್ನು ವಿಸ್ತರಿಸಿಕೊಂಡರು. 1978ರಲ್ಲಿ ದೆಹಲಿಯ ಎನ್ ಎಸ್ ಡಿಗೆ ತೆರಳಿ ಬಿ.ವಿ.ಕಾರಂತರ ಮ್ಯಾಕ್ ಬೆತ್ ನಾಟಕಕ್ಕೆ ಸಹಾಯಕರಾಗುವುದರ ಮೂಲಕ ರಂಗಭೂಮಿಯ ಅನುಭವ ಗಳಿಸಿದರು. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಮಟಪಾಡಿ ವೀರಭದ್ರ ನಾಯಕರ ಗುರುತ್ವವು ಕಲಾಬದುಕಿನ ಹೊಸ ಬಾಗಿಲನ್ನು ತೆರೆಯಿತು. ಗುರು ನೀಲಾವರ ರಾಮಕೃಷ್ಣಯ್ಯ ಅವರು ಭಾಗವತಿಕೆಯೊಂದಿಗೆ ಯಕ್ಷಗಾನದ ಸಂಸ್ಕಾರವನ್ನು ಊಡಿಸಿದರು. ಗುರು ಹಿರಿಯಡಕ ಬಿರ್ತಿ ಬಾಲಕೃಷ್ಣ ಅವರೊಂದಿಗೆ ಮಾಯಾರಾವ್ ಅವರ ತಂಡದಲ್ಲಿ ಯುರೋಪ್ ಪ್ರವಾಸ ಮಾಡುವುದರೊಂದಿಗೆ ಯಕ್ಷಗಾನ ಸಾಧನೆಯ ಮತ್ತೊಂದು ಮಜಲು ತೆರೆದುಕೊಂಡಿತು. ಕೋಟ ಶಿವರಾಮ ಕಾರಂತರ ಬ್ಯಾಲೆಯಂಥ ಯಕ್ಷಗಾನ ಪ್ರಯೋಗಗಳಲ್ಲಿ ಭಾಗವಹಿಸಿ ಹಲವು ದೇಶಗಳನ್ನು ಸುತ್ತಿದರು. ಬದುಕಿನ ನಿರ್ಣಾಯಕ ಘಟ್ಟಗಳಲ್ಲಿ ಶಿವರಾಮ ಕಾರಂತರಿಂದಲೇ ಮಾರ್ಗದರ್ಶನ ಪಡೆದ ಭಾಗ್ಯ ಸಂಜೀವ ಸುವರ್ಣರದು.
ಯಕ್ಷಗಾನ ಕಲಾವಿದರಾಗಿ ಸುಮಾರು ಐವತ್ತು ದೇಶಗಳನ್ನು ಮತ್ತು ಭಾರತದಾದ್ಯಂತ ಹಲವು ನಗರಗಳನ್ನು ಸುತ್ತಿರುವ ಸಂಜೀವ ಸುವರ್ಣರು ಸಮಕಾಲೀನ ಪ್ರಯೋಗಗಳ ಅನುಭವಿಯಾದರೂ ಸಾಂಪ್ರದಾಯಿಕ ಯಕ್ಷಗಾನದ ಬಗ್ಗೆ ಆಳವಾದ ಅಧ್ಯಯನ ಮಾಡಿ, ಪೂರ್ವರಂಗವನ್ನು ಸಮಗ್ರವಾಗಿ ಪ್ರಸ್ತುತಪಡಿಸಬಲ್ಲ ಸಮರ್ಥರು. ನಾಟ್ಯಾಭಿನಯ, ವೇಷಭೂಷಣ ತಯಾರಿಕೆ, ಹಿಮ್ಮೇಳ, ಚೆಂಡೆ-ಮದ್ದಲೆ ತಯಾರಿಕೆ ಹೀಗೆ ಯಕ್ಷಗಾನದ ಸಕಲ ಅಂಗಗಳನ್ನು ಬಲ್ಲವರು. ಜರ್ಮನಿಯ ಕ್ಯಾಥರೀನ್ ಬೈಂದರ್ ಅವರು ಸಂಜೀವ ಸುವರ್ಣರ ಗುರುತ್ವದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಪಿಎಚ್.ಡಿ ಮಾಡಿದ್ದಾರೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದು ಸಂಜೀವ ಸುವರ್ಣರ ಹೆಚ್ಚುಗಾರಿಕೆ. ಚಿದಂಬರರಾವ್ ಜಂಬೆಯವರೊಂದಿಗೆ ಎನ್ ಎಸ್ ಡಿಯ ವಿದ್ಯಾರ್ಥಿಗಳಿಗೆ ಯಕ್ಷಗಾನೀಯವಾದ ಕೊರಿಯೋಗ್ರಪಿ ಕಲಿಸಿಕೊಟ್ಟಿದ್ದಾರೆ. ಪ್ರಸ್ತುತ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿರುವ ಸಂಜೀವ ಸುವರ್ಣ ಅವರು ಕಳೆದ ಕೆಲವು ವರ್ಷಗಳಿಂದ ಅನೇಕ ಮಕ್ಕಳಿಗೆ ಉಚಿತ ಶಾಲಾಶಿಕ್ಷಣ ಮತ್ತು ಯಕ್ಷಗಾನ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಕಲೆ ಮಾನವತೆಯನ್ನು ಪ್ರತಿಪಾದಿಸಬೇಕು ಮತ್ತು ಸಮಾಜಪುರವಾಗಿ ತೆರೆದುಕೊಳ್ಳಬೇಕೆಂಬುದು ಸಂಜೀವ ಸುವರ್ಣರ ತಾತ್ತ್ವಿಕ ನಿಲುವು. ಪತ್ನಿ ವೇದಾವತಿ ಮತ್ತು ಇಬ್ಬರು ಮಕ್ಕಳೊಂದಿಗೆ ಉಡುಪಿ-ಬುಡ್ನಾರಿನ ಗುರುದಕ್ಷಿಣೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಈ ವೀಡಿಯೋದಲ್ಲಿ ಯಕ್ಷಗಾನದ ಬಾಲಗೋಪಾಲ ನೃತ್ಯದ ಪ್ರಾತ್ಯಕ್ಷಿಕೆ ನೋಡಿ.
Повторяем попытку...
Доступные форматы для скачивания:
Скачать видео
-
Информация по загрузке: