ಸಾವಿರ ಕೊಡದ ಹರಕೆಯ ಕ್ಷೇತ್ರವೇ ಈ " ಶ್ರೀ ವಿನಾಯಕ ದೇವಸ್ಥಾನ, ಶ್ರೀ ಕ್ಷೇತ್ರ ಗುಡ್ಡೆಟ್ಟು "
Автор: Voice of H.M Bhat
Загружено: 2025-01-27
Просмотров: 1622
Описание:
ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ, "ಶ್ರೀ ವಿನಾಯಕ ದೇವಸ್ಥಾನ" "ಶ್ರೀ ಕ್ಷೇತ್ರ ಗುಡ್ಡೆಟ್ಟು". ಅತಿ ಪುರಾತನವಾದ, ಮಹಿಮಾನ್ವಿತ, ಕ್ಷೇತ್ರ ಇದಾಗಿದೆ. ಸ್ಥಳ ಪುರಾಣದ ಪ್ರಕಾರ, ತ್ರಿಪುರಾಸುರ ಸಂಹಾರ ಕಾಲದಲ್ಲಿ ಗಣಪತಿಯನ್ನು ಪ್ರಾರ್ಥನೆ ಮಾಡದೇ ಹೋಗಿದ್ದಾಗ ದೇವತೆಗಳಿಗೆ ಅಪಜಯ ವಾಗುತ್ತದೆ. ಇದನ್ನರಿತ ಪರಶಿವ ಗಣಪತಿಯ ಮೇಲೆ ಸಿಟ್ಟುಗೊಂಡು ಅಗ್ನೇಯಾಸ್ತೃವನ್ನು ಪ್ರಯೋಗಿಸುತ್ತಾನೆ. ಹರ ಬಿಟ್ಟ ಬಾಣಕ್ಕೆ ಹುಸಿ ಇಲ್ಲದೆ ಇರುವುದರಿಂದ ಗಣಪತಿಯನ್ನ ಮಧು ಸಮುದ್ರಕ್ಕೆ ಆ ಬಾಣವು ಕೊಂಡು ಹೋಯಿತು ಎನ್ನುವುದು ಇತಿಹಾಸ. ಸಪ್ತ ಸಮುದ್ರಗಳು ಒಂದಾದ ಜೇನುತುಪ್ಪದ ಸಮುದ್ರಕ್ಕೆ ಇಳಿದ ಗಣಪತಿಯು ಯಥೇಚ್ಛವಾಗಿ ಮಧುಪಾನ ಮಾಡುತ್ತಾನೆ. ತನ್ಮೂಲಕವಾಗಿ ಉಷ್ಣ ವಾಗುತ್ತದೆ. ಅದರ ಪರಿಹಾರಕ್ಕೆ ತಂದೆಯನ್ನು ಮೊರೆ ಹೊಕ್ಕಾಗ ಈಶ್ವರ ದೇವರು ಜಲಾಧಿವಾಸ ಆದರೆ ನಿನ್ನ ಬಾಧೆ ಪರಿಹಾರ ಆಗುತ್ತದೆ ಎನ್ನುತ್ತಾನೆ. ಈಶ್ವರನ ಆಣತಿಯಂತೆ ಗುಹೆಯೊಳಗೆ ಕಂಠ ಪ್ರಮಾಣದ ವರೆಗೆ ನೀರಿಂದ ಜಲಾವೃತವಾಗಿ ತನ್ನ ಉರಿಯನ್ನು ಶಮನ ಮಾಡಿಕೊಳ್ಳುತ್ತಾನೆ .ಹಾಗಾಗಿ ಇಲ್ಲಿ ಸಹಸ್ರ ಕುಂಭಾಭಿಷೇಕ ಪ್ರಾರಂಭವಾಯಿತು ಎನ್ನುವುದು ಇತಿಹಾಸ. ಸುಮಾರು 2047 ನ ಇಸವಿಯ ವರೆಗೆ ಈ ಸೇವೆಯು ಬುಕ್ ಆಗಿದ್ದು, ಭಕ್ತರು ಇಚ್ಛೆಪಟ್ಟಲ್ಲಿ ಸೇವೆ ಆಗಬೇಕೆಂದಾದರೆ 2047 ನೇ ಇಸವಿಯ ನಂತರ ಆಯುರ್ ಕೊಡ ಸೇವೆ ಮಾಡುವ ಭಾಗ್ಯ ಒದಗುತ್ತದೆ .ನಿತ್ಯವೂ ಅನ್ನದಾನ ನಡೆಯುತ್ತಿದ್ದು ,ದಿನಕ್ಕೆ ಎರಡು ಬಾರಿ ಅಂತೆ ಆಯುರ್ ಕೊಡ ಸೇವೆ ನಡೆಯುತ್ತದೆ. ಅನುವಂಶೀಯ ಆಡಳಿತ ಮುಖ್ಯಸ್ಥರಾದ ಅನಂತಪದ್ಮನಾಭ ಅಡಿಗರ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದಿದ್ದು. ಇನ್ನೂ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿರುತ್ತಾರೆ .ತಾವೆಲ್ಲರೂ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ಕೊಡಲೇಬೇಕಾದ ಸಿದ್ಧ ಕ್ಷೇತ್ರ ಮಹಿಮಾನ್ವಿತ ಕ್ಷೇತ್ರ ಇದಾಗಿದೆ..
#travel #historicaltemples #karavalipeople #karnataka #udupitemple #history #historcal
Повторяем попытку...
Доступные форматы для скачивания:
Скачать видео
-
Информация по загрузке: