ರಾಜ್ಯ ಸಚಿವರ ಕಾರ್ಯವೈಖರಿಗೆ ಅಸಮಾಧಾನ ; ವಿಧಾನಮಂಡಲ ಕಲಾಪ ಮುಂದೂಡಿದ ಸಭಾಧ್ಯಕ್ಷರು
Автор: DD Chandana News
Загружено: 2026-03-16
Просмотров: 60
Описание:
ರಾಜ್ಯ ಸರ್ಕಾರದ ಕಾರ್ಯವೈಖರಿ, ಸಮರ್ಪಕ ಉತ್ತರ ನೀಡದ ಸಚಿವರ ಕ್ರಮಕ್ಕೆ ಅತೃಪ್ತಿ, ಅಸಾಮಾಧಾನಗೊಂಡು ಆಡಳಿತ ಪಕ್ಷದವರೇ ಆಗಿರುವ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಅಧಿವೇಶನ ಮುಂದೂಡಿದ ಅಪರೂಪದ ಘಟನೆ ವಿಧಾನಸಭೆಯಲ್ಲಿ ಇಂದು ನಡೆದಿದೆ.
ಸಾಮಾನ್ಯವಾಗಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ, ಗದ್ದಲ, ಕೋಲಾಹಲ, ಮಾತಿನ ಚಕಮಕಿ, ಮತ್ತಿತರ ಸಂದರ್ಭದಲ್ಲಿ ಸದನ ನಡೆಸಲು ಸಾಧ್ಯವಾಗದಿದ್ದಾಗ ಸಭಾಧ್ಯಕ್ಷರು ಕಲಾಪವನ್ನು ಮುಂದೂಡುವುದು ಸಹಜ. ಆದರೆ, ನಿಗದಿತ ಸಮಯಕ್ಕೆ ಕಲಾಪ ಆರಂಭಿಸಲು ಕೋರಂ ಕೊರತೆ, ಲಿಖಿತವಾಗಿ ಮಂಡಿಸಬೇಕಾದ ಉತ್ತರಗಳನ್ನು ಕಡೆಗಣಿಸುವುದೂ ಸೇರಿದಂತೆ ವಿವಿಧ ವಿಷಯಗಳಿಂದ ಅಸಮಾಧಾನಗೊಂಡು ಕಲಾಪ ಮುಂದೂಡಿ ಸಭಾಧ್ಯಕ್ಷರು ಹೊರ ನಡೆದಿದ್ದಾರೆ.
ಮೂರು ತಿಂಗಳಿಗೊಮ್ಮೆ ಅಧಿವೇಶನ ನಡೆಸುವುದು, ಶಾಸಕರು ಸಮಸ್ಯೆಗಳನ್ನು ಚರ್ಚೆ ಮಾಡಲಿಕ್ಕೆ. ಹೀಗಿದ್ದರೂ ಸಚಿವರು ಸೂಕ್ತ ಪ್ರತಿಕ್ರಿಯೆ ನೀಡದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅಧಿವೇಶನ ನಡೆಸುವುದು ಸಚಿವರಿಗಾಗಿ ಅಲ್ಲ. ಬದಲಾಗಿ ಶಾಸಕರಿಗಾಗಿ. ಉತ್ತರ ನೀಡುವಾಗ ಸಚಿವರು, ತಮ್ಮ ತಮ್ಮ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿ, ಸ್ಪಷ್ಟ ವಿವರಣೆ ನೀಡದ ಹೊರತು ತಾವು ಕಲಾಪವನ್ನು ನಡೆಸುವುದಿಲ್ಲ ಎಂದು ಹೇಳಿ, ಕಲಾಪ ಮುಂದೂಡಿದರು.
ಇದಕ್ಕೂ ಮುನ್ನ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಲಿಖಿತವಾಗಿ ಉತ್ತರ ಮಂಡಿಸುವ 230 ಪ್ರಶ್ನೆಗಳ ಪೈಕಿ ಸರ್ಕಾರದ ಪರವಾಗಿ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ಸದಸ್ಯ ಎಸ್ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಕನಿಷ್ಠ 125 ಪ್ರಶ್ನೆಗಳಿಗಾದರೂ ಉತ್ತರ ಬರಬೇಕಾಗಿತ್ತು. ಆದರೆ 84 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಸರ್ಕಾರಕ್ಕೆ ಹಲವು ಬಾರಿ ಸಭಾಧ್ಯಕ್ಷರು ಸಲಹೆ ನೀಡಿದರೂ, ಸರ್ಕಾರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಬಳಿಕ ಸದನ ಸಮಾವೇಶಗೊಂಡಾಗ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಭಾಧ್ಯಕ್ಷರು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನಗೊಂಡು ವಿಧಾನಸಭೆ ಕಲಾಪವನ್ನು ಮುಂದೂಡಿರುವುದು ಅಪರೂಪದ ಬೆಳವಣಿಗೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ. ಉತ್ತರ ನೀಡಲು ವಿಫಲವಾಗುವ ಕಾರ್ಯದರ್ಶಿಗಳ ಅಮಾನತಿಗೂ ನಿರ್ದೇಶಿಸಿದ್ದಾರೆ. ಇನ್ನು ಮುಂದೆ ಇಂತಹ ಸನ್ನಿವೇಶ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಆರ್. ಅಶೋಕ, ವಿಧಾನಸಭಾ ಕಲಾಪದಲ್ಲಿ ಶಾಸಕರು, ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಕುರಿತು ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಪರಮಾರ್ಶೆ ನಡೆಸಬೇಕು. ಆದರೆ, ಮುಖ್ಯ ಕಾರ್ಯದರ್ಶಿಗಳೇ ಅಸಹಾಯಕರಾಗಿದ್ದಾರೆ. ಸಮರ್ಪಕ ಉತ್ತರ ನೀಡದ ಕಾರ್ಯದರ್ಶಿಗಳನ್ನು ಅಮಾನತು ಮಾಡಬೇಕು. ವಿಧಾನಸಭಾ ಸ್ಪೀಕರ್ ಈ ವಿಷಯದಲ್ಲಿ ನಡೆದುಕೊಂಡ ರೀತಿ ಶ್ಲಾಘನೀಯ ಎಂದರು.
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: