ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ರಾಜ್ಯ ಸಚಿವರ ಕಾರ್ಯವೈಖರಿಗೆ ಅಸಮಾಧಾನ ; ವಿಧಾನಮಂಡಲ ಕಲಾಪ ಮುಂದೂಡಿದ ಸಭಾಧ್ಯಕ್ಷರು

Автор: DD Chandana News

Загружено: 2026-03-16

Просмотров: 60

Описание: ರಾಜ್ಯ ಸರ್ಕಾರದ ಕಾರ್ಯವೈಖರಿ, ಸಮರ್ಪಕ ಉತ್ತರ ನೀಡದ ಸಚಿವರ ಕ್ರಮಕ್ಕೆ ಅತೃಪ್ತಿ, ಅಸಾಮಾಧಾನಗೊಂಡು ಆಡಳಿತ ಪಕ್ಷದವರೇ ಆಗಿರುವ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಅಧಿವೇಶನ ಮುಂದೂಡಿದ ಅಪರೂಪದ ಘಟನೆ ವಿಧಾನಸಭೆಯಲ್ಲಿ ಇಂದು ನಡೆದಿದೆ.
ಸಾಮಾನ್ಯವಾಗಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ, ಗದ್ದಲ, ಕೋಲಾಹಲ, ಮಾತಿನ ಚಕಮಕಿ, ಮತ್ತಿತರ ಸಂದರ್ಭದಲ್ಲಿ ಸದನ ನಡೆಸಲು ಸಾಧ್ಯವಾಗದಿದ್ದಾಗ ಸಭಾಧ್ಯಕ್ಷರು ಕಲಾಪವನ್ನು ಮುಂದೂಡುವುದು ಸಹಜ. ಆದರೆ, ನಿಗದಿತ ಸಮಯಕ್ಕೆ ಕಲಾಪ ಆರಂಭಿಸಲು ಕೋರಂ ಕೊರತೆ, ಲಿಖಿತವಾಗಿ ಮಂಡಿಸಬೇಕಾದ ಉತ್ತರಗಳನ್ನು ಕಡೆಗಣಿಸುವುದೂ ಸೇರಿದಂತೆ ವಿವಿಧ ವಿಷಯಗಳಿಂದ ಅಸಮಾಧಾನಗೊಂಡು ಕಲಾಪ ಮುಂದೂಡಿ ಸಭಾಧ್ಯಕ್ಷರು ಹೊರ ನಡೆದಿದ್ದಾರೆ.
ಮೂರು ತಿಂಗಳಿಗೊಮ್ಮೆ ಅಧಿವೇಶನ ನಡೆಸುವುದು, ಶಾಸಕರು ಸಮಸ್ಯೆಗಳನ್ನು ಚರ್ಚೆ ಮಾಡಲಿಕ್ಕೆ. ಹೀಗಿದ್ದರೂ ಸಚಿವರು ಸೂಕ್ತ ಪ್ರತಿಕ್ರಿಯೆ ನೀಡದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅಧಿವೇಶನ ನಡೆಸುವುದು ಸಚಿವರಿಗಾಗಿ ಅಲ್ಲ. ಬದಲಾಗಿ ಶಾಸಕರಿಗಾಗಿ. ಉತ್ತರ ನೀಡುವಾಗ ಸಚಿವರು, ತಮ್ಮ ತಮ್ಮ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿ, ಸ್ಪಷ್ಟ ವಿವರಣೆ ನೀಡದ ಹೊರತು ತಾವು ಕಲಾಪವನ್ನು ನಡೆಸುವುದಿಲ್ಲ ಎಂದು ಹೇಳಿ, ಕಲಾಪ ಮುಂದೂಡಿದರು.
ಇದಕ್ಕೂ ಮುನ್ನ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಲಿಖಿತವಾಗಿ ಉತ್ತರ ಮಂಡಿಸುವ 230 ಪ್ರಶ್ನೆಗಳ ಪೈಕಿ ಸರ್ಕಾರದ ಪರವಾಗಿ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ಸದಸ್ಯ ಎಸ್ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಕನಿಷ್ಠ 125 ಪ್ರಶ್ನೆಗಳಿಗಾದರೂ ಉತ್ತರ ಬರಬೇಕಾಗಿತ್ತು. ಆದರೆ 84 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಸರ್ಕಾರಕ್ಕೆ ಹಲವು ಬಾರಿ ಸಭಾಧ್ಯಕ್ಷರು ಸಲಹೆ ನೀಡಿದರೂ, ಸರ್ಕಾರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಬಳಿಕ ಸದನ ಸಮಾವೇಶಗೊಂಡಾಗ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಭಾಧ್ಯಕ್ಷರು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನಗೊಂಡು ವಿಧಾನಸಭೆ ಕಲಾಪವನ್ನು ಮುಂದೂಡಿರುವುದು ಅಪರೂಪದ ಬೆಳವಣಿಗೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ. ಉತ್ತರ ನೀಡಲು ವಿಫಲವಾಗುವ ಕಾರ್ಯದರ್ಶಿಗಳ ಅಮಾನತಿಗೂ ನಿರ್ದೇಶಿಸಿದ್ದಾರೆ. ಇನ್ನು ಮುಂದೆ ಇಂತಹ ಸನ್ನಿವೇಶ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಆರ್. ಅಶೋಕ, ವಿಧಾನಸಭಾ ಕಲಾಪದಲ್ಲಿ ಶಾಸಕರು, ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಕುರಿತು ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಪರಮಾರ್ಶೆ ನಡೆಸಬೇಕು. ಆದರೆ, ಮುಖ್ಯ ಕಾರ್ಯದರ್ಶಿಗಳೇ ಅಸಹಾಯಕರಾಗಿದ್ದಾರೆ. ಸಮರ್ಪಕ ಉತ್ತರ ನೀಡದ ಕಾರ್ಯದರ್ಶಿಗಳನ್ನು ಅಮಾನತು ಮಾಡಬೇಕು. ವಿಧಾನಸಭಾ ಸ್ಪೀಕರ್ ಈ ವಿಷಯದಲ್ಲಿ ನಡೆದುಕೊಂಡ ರೀತಿ ಶ್ಲಾಘನೀಯ ಎಂದರು.

#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ರಾಜ್ಯ ಸಚಿವರ ಕಾರ್ಯವೈಖರಿಗೆ ಅಸಮಾಧಾನ ; ವಿಧಾನಮಂಡಲ ಕಲಾಪ ಮುಂದೂಡಿದ ಸಭಾಧ್ಯಕ್ಷರು

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Speaker UT Khader | Assembly Session 2026 | ಸದನದಲ್ಲಿ ಮಂತ್ರಿಗಳು ಬರದೇ ಎದ್ದು ಹೋದ ಸ್ಪೀಕರ್ | N18V

Speaker UT Khader | Assembly Session 2026 | ಸದನದಲ್ಲಿ ಮಂತ್ರಿಗಳು ಬರದೇ ಎದ್ದು ಹೋದ ಸ್ಪೀಕರ್ | N18V

Budget Session: ಸ್ಲಂ ಬೋರ್ಡ್​ಗಳ ಬಗ್ಗೆ ಮುನಿರತ್ನ ಪ್ರಶ್ನೆಗಳಿಗೆ ಜಮೀರ್ ತಿರುಗೇಟು!  #pratidhvani

Budget Session: ಸ್ಲಂ ಬೋರ್ಡ್​ಗಳ ಬಗ್ಗೆ ಮುನಿರತ್ನ ಪ್ರಶ್ನೆಗಳಿಗೆ ಜಮೀರ್ ತಿರುಗೇಟು! #pratidhvani

Big Bulletin With HR Ranganath | LPG ಹೊತ್ತುಬಂದ ಮತ್ತೊಂದು ಭಾರತೀಯ ಹಡಗು | March  16, 2026

Big Bulletin With HR Ranganath | LPG ಹೊತ್ತುಬಂದ ಮತ್ತೊಂದು ಭಾರತೀಯ ಹಡಗು | March 16, 2026

ಜಲ ಜೀವನ್ ಮಿಷನ್  ಗಮನಾರ್ಹ ಪ್ರಗತಿ ; 15.83 ಕೋಟಿ ಕುಟುಂಬಗಳಿಗೆ ಕೊಳವೆ ನೀರು

ಜಲ ಜೀವನ್ ಮಿಷನ್ ಗಮನಾರ್ಹ ಪ್ರಗತಿ ; 15.83 ಕೋಟಿ ಕುಟುಂಬಗಳಿಗೆ ಕೊಳವೆ ನೀರು

News18 Kannada Varshada Kannadiga 2026 | ರವಿಚಂದ್ರನ್ ಕಾಲೆಳೆದ DCM ಡಿಕೆಶಿ | Ravichandran | DKS

News18 Kannada Varshada Kannadiga 2026 | ರವಿಚಂದ್ರನ್ ಕಾಲೆಳೆದ DCM ಡಿಕೆಶಿ | Ravichandran | DKS

ಇರಾನ್ ದಾಳಿಯ ಬಳಿಕ ನಿಗೂಢವಾದ ಪ್ರಧಾನಿ! | Netanyahu Death Rumors | Irael Iran War | Suvarna News Hour

ಇರಾನ್ ದಾಳಿಯ ಬಳಿಕ ನಿಗೂಢವಾದ ಪ್ರಧಾನಿ! | Netanyahu Death Rumors | Irael Iran War | Suvarna News Hour

ವಕ್ಫ್ ಆಸ್ತಿ ಒತ್ತುವರಿ ಸಚಿವ ಜಮೀರ್'ಗೆ ಖಡಕ್ ಪ್ರಶ್ನೆ ಹಾಕಿದ ಕಾಂಗ್ರೆಸ್ ಶಾಸಕ! ಸದನದಲ್ಲಿ ಸತ್ಯ ಒಪ್ಪಿಕೊಂಡ ಜಮೀರ್!

ವಕ್ಫ್ ಆಸ್ತಿ ಒತ್ತುವರಿ ಸಚಿವ ಜಮೀರ್'ಗೆ ಖಡಕ್ ಪ್ರಶ್ನೆ ಹಾಕಿದ ಕಾಂಗ್ರೆಸ್ ಶಾಸಕ! ಸದನದಲ್ಲಿ ಸತ್ಯ ಒಪ್ಪಿಕೊಂಡ ಜಮೀರ್!

ವಿವಿಧ ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ; ಪ್ರಾಚ್ಯ ವಸ್ತುಗಳ ಸಂರಕ್ಷಣೆಗೆ ಕ್ರಮ

ವಿವಿಧ ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ; ಪ್ರಾಚ್ಯ ವಸ್ತುಗಳ ಸಂರಕ್ಷಣೆಗೆ ಕ್ರಮ

Navro‘zoldi ob-havo prognozi

Navro‘zoldi ob-havo prognozi

LIVE : DD CHANDANA NEWS 16.03.2026 4.30 PM

LIVE : DD CHANDANA NEWS 16.03.2026 4.30 PM

Indian Oil Tanker Received Helicopter Escort From Navy | ಭಾರತದ ತೈಲ ಹಡಗಿಗೆ ನೌಕಾಸೇನೆಯಿಂದ ಎಸ್ಕಾರ್ಟ್

Indian Oil Tanker Received Helicopter Escort From Navy | ಭಾರತದ ತೈಲ ಹಡಗಿಗೆ ನೌಕಾಸೇನೆಯಿಂದ ಎಸ್ಕಾರ್ಟ್

ರೈಲ್ವೆ ವಲಯದಲ್ಲಿ ವೇಗದ ಅಭಿವೃದ್ಧಿ ; ಐತಿಹಾಸಿಕ 4.78 ಲಕ್ಷ ಕೋಟಿ ರೂ. ಮೀಸಲು

ರೈಲ್ವೆ ವಲಯದಲ್ಲಿ ವೇಗದ ಅಭಿವೃದ್ಧಿ ; ಐತಿಹಾಸಿಕ 4.78 ಲಕ್ಷ ಕೋಟಿ ರೂ. ಮೀಸಲು

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ; ಪರಿಶಿಷ್ಟ ಸಮುದಾಯ, ಮಹಿಳೆಯರಿಗೆ ಅನುಕೂಲ

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ; ಪರಿಶಿಷ್ಟ ಸಮುದಾಯ, ಮಹಿಳೆಯರಿಗೆ ಅನುಕೂಲ

DD CHANDANA NEWS. .16.03.2026. 11.00 AM

DD CHANDANA NEWS. .16.03.2026. 11.00 AM

ಅಮೇರಿಕಾಗೆ ಅತಿದೊಡ್ಡ ಶಾಕ್- ಚೀನಾ ಬೆಂಬಲ ಬೇಡಿದ ಅಮೇರಿಕಾ- ಮತ್ತೊಂದು ಜಲಸಂಧಿ ಬಂದ್- America vs iran war update

ಅಮೇರಿಕಾಗೆ ಅತಿದೊಡ್ಡ ಶಾಕ್- ಚೀನಾ ಬೆಂಬಲ ಬೇಡಿದ ಅಮೇರಿಕಾ- ಮತ್ತೊಂದು ಜಲಸಂಧಿ ಬಂದ್- America vs iran war update

LIVE : DD CHANDANA NEWS 16.03.2026 7.00 PM

LIVE : DD CHANDANA NEWS 16.03.2026 7.00 PM

DD CHANDANA NEWS. 16.03.2026. 1.00 PM

DD CHANDANA NEWS. 16.03.2026. 1.00 PM

RAW ಮೇಲಿನ ನಿರ್ಬಂಧಕ್ಕೆ ಅಮೆರಿಕ ಶಿಫಾರಸ್ಸು! | Iran Tension | Gulf Targeted | Masth Magaa | Suttu Jagattu

RAW ಮೇಲಿನ ನಿರ್ಬಂಧಕ್ಕೆ ಅಮೆರಿಕ ಶಿಫಾರಸ್ಸು! | Iran Tension | Gulf Targeted | Masth Magaa | Suttu Jagattu

ಟೆಲ್ ಅವೀವ್ ನಲ್ಲಿ ವಿನಾಶಕ್ಕೆ ಕಾರಣವಾಗುತ್ತಿರುವ ಇರಾನ್ ಕ್ಷಿಪಣಿಗಳು ! Iran-Israel war | Tel Aviv - Netanyahu

ಟೆಲ್ ಅವೀವ್ ನಲ್ಲಿ ವಿನಾಶಕ್ಕೆ ಕಾರಣವಾಗುತ್ತಿರುವ ಇರಾನ್ ಕ್ಷಿಪಣಿಗಳು ! Iran-Israel war | Tel Aviv - Netanyahu

🔴 LIVE | US-Israel-Iran War: ಬೆಂಗಳೂರಿನಿಂದ ದುಬೈಗೆ ತೆರಳಿದ್ದ ವಿಮಾನ ವಾಪಸ್ | #TV9D​

🔴 LIVE | US-Israel-Iran War: ಬೆಂಗಳೂರಿನಿಂದ ದುಬೈಗೆ ತೆರಳಿದ್ದ ವಿಮಾನ ವಾಪಸ್ | #TV9D​

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]