ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಜನರು ಭಯಪಡುವ ಅಗತ್ಯವಿಲ್ಲ ಹಲಗೂರಿನಲ್ಲಿ ಖ್ಯಾತ ನೇತ್ರ ತಜ್ಞೆ ಚೈತ್ರ ಹೇಳಿಕೆ
Автор: MAMARA NEWS ಸತ್ಯಮೇವ ಜಯತೆ
Загружено: 2026-02-12
Просмотров: 166
Описание:
ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಭಯಪಡುವ ಅವಶ್ಯಕತೆ ಇಲ್ಲ ಡಾಕ್ಟರ್ ಚೈತ್ರ.
ಹಲಗೂರು:- ನಮ್ಮ ದೇಹದ ಬಹು ಮುಖ್ಯವಾದ ಅಂಗವೆಂದರೆ ಕಣ್ಣು, ಅದರ ಬಗ್ಗೆ ಯಾರೂ ನಿರ್ಲಕ್ಷಿಸಬಾರದು ನಿಮಗೆ ದೂರ ದೃಷ್ಟಿ ದೋಷ ಅಥವಾ ಹತ್ತಿರದೃಷ್ಟಿ ದೋಷ ಯಾವಾಗಲೂ ಕಣ್ಣಿನಿಂದ ನೀರು ಬರುತ್ತಿದ್ದರೆ ತಕ್ಷಣ ಹತ್ತಿರದ ಕಣ್ಣಿನ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದುಕೊಳ್ಳಿ ,ಅವಶ್ಯಕತೆ ಇದ್ದರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಅದಕ್ಕಾಗಿ ಹೆದರುವ ಅವಶ್ಯಕತೆ ಇರುವುದಿಲ್ಲ ,ಎಂದು ಬಿ. ಡಬ್ಲ್ಯೂ. ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಚೈತ್ರ ತಿಳಿಸಿದರು.
ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಹಲಗೂರು ಲಯನ್ಸ್ ಕ್ಲಬ್ ಆವರಣದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಬಿ. ಡಬ್ಲ್ಯೂ. ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ,
ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮಂಡ್ಯ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಆಸ್ಪತ್ರೆ ವತಿಯಿಂದ ಉಚಿತವಾಗಿ ಕಣ್ಣಿನ ಪರೀಕ್ಷೆ ನಡೆಸಿ ಅವಶ್ಯಕತೆ ಇರುವ ವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಇದುವರೆಗೂ ಲಕ್ಷಾಂತರ ಜನರಿಗೆ ಕಣ್ಣಿನ ಸಮಸ್ಯೆಯನ್ನು ನಿವಾರಿಸಿದ್ದೇವೆ . ಯಾವುದಕ್ಕೂ ಭಯಪಡುವ ಅವಶ್ಯಕತೆ ಇರುವುದಿಲ್ಲ. ಇಂತಹ ಶಿಬಿರಗಳನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ಕಣ್ಣನ್ನು ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಜಿ. ಎಸ್. ಮನೋಹರ್ ಮಾತನಾಡಿ, ನಮ್ಮ ಸಂಸ್ಥೆ 45 ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಆರೋಗ್ಯ ಶಿಬಿರ, ಹೃದಯ ರೋಗ, ಕಿವಿ, ಗಂಟಲು ಮತ್ತು ಮೂಗು ,ದಂತಕ್ಕೆ ಸಂಬಂಧಪಟ್ಟ ರೋಗಗಳ ತಪಾಸಣಾ ಶಿಬಿರದ ಕಾರ್ಯಕ್ರಮವನ್ನು ಉಚಿತವಾಗಿ ಆಯೋಜಿಸಿಕೊಂಡು ಬರುತ್ತಿದ್ದೇವೆ. ಇಂದಿನ ಈ ಶಿಬಿರದಲ್ಲಿ ಸುಮಾರು 85ಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 30 ಜನರಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದು, ಅವರನ್ನು ಇಂದು ಬೆಂಗಳೂರಿಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಂತರ ಶನಿವಾರ ಇದೇ ಸ್ಥಳಕ್ಕೆ ಕರೆದುಕೊಂಡು ಬಂದು ಬಿಡಲಾಗುತ್ತದೆ .
ಗ್ರಾಮೀಣ ಪ್ರದೇಶದ ಜನರು ಇಂತಹ ಶಿಬಿರವನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು .ನಂತರ ಸಂಸ್ಥೆ ವತಿಯಿಂದ ವೈದ್ಯಾಧಿಕಾರಿ ಚೈತ್ರ ಮತ್ತು ನಾಗೇಶ್ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಬಿ. ಎಸ್. ಮನೋಹರ, ಖಜಾಂಜಿ ಸಿ .ಪ್ರವೀಣ ,ಕಾರ್ಯದರ್ಶಿ ಎ.ಟಿ .ಶ್ರೀನಿವಾಸ್ ಸೇರಿದಂತೆ ಸದಸ್ಯರುಗಳಾದ ಡಾ. ಎ. ಎಸ್. ನಾಗೇಶ್, ಎ .ಎಸ್. ದೇವರಾಜು ,ಎಚ್. ಆರ್. ಪದ್ಮನಾಭ, ಕೆ. ಶಿವರಾಜು, ಡಾ. ಷಂಶುದ್ದೀನ್, ಡಿ.ಎಲ್. ಮಾದೇಗೌಡ ,ನಾಗೇಶ್ ಮತ್ತು ಇತರರು ಇದ್ದರು.
12hgr1 ಹಲಗೂರಿನ ಲಯನ್ಸ್ ಕ್ಲಬ್ ಆವರಣದಲ್ಲಿ ಕಣ್ಣಿನ ತಪಾಸಣೆ ನಡೆಸುತ್ತಿರುವ ವೈದ್ಯಾಧಿಕಾರಿ ಚೈತ್ರ.
12hgr2 ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ವೈದ್ಯಾಧಿಕಾರಿ ಚೈತ್ರ.
Повторяем попытку...
Доступные форматы для скачивания:
Скачать видео
-
Информация по загрузке: