ಬಸವಣ್ಣನವರ ತತ್ವಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕತೆಜೀವನಕ್ಕೆ ರಾಜ್ಯಾಧ್ಯಕ್ಷರಾದ ಷಡಕ್ಷರಿ ಸಿಎಸ್ ಕರೆ
Автор: MAMARA NEWS ಸತ್ಯಮೇವ ಜಯತೆ
Загружено: 2026-02-08
Просмотров: 340
Описание:
ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ಮಾಡಿ ರಾಜ್ಯಾಧ್ಯಕ್ಷ ಷಡಕ್ಷರಿ ಸಿಎಸ್ ಕರೆ
ಪಟ್ಟಣದ ಶ್ರೀಬಸವೇಶ್ವರ ಪತ್ತಿನ ಸಹಕಾರಕ್ಕೆ ಸಂಘ ಮತ್ತು ಕ್ಷೇಮಾಭಿವೃದ್ಧಿ ಸಂಘದಿಂದ ರಾಜ್ಯಾಧ್ಯಕರಿಗೆ ಭರಪೂರ ಅಭಿನಂದನೆ
ಮಳವಳ್ಳಿ 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ ಸಂದೇಶ ನೀಡಿದ ಬಸವಣ್ಣನವರ ತತ್ವ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಕಾಯಕದ ಸೇವೆ ನೀಡುವ ಮೂಲಕ ಜೀವನ ಸಾರ್ಥಕತೆ ಪಡಿಸಕೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸಿಎಸ್ ಕರೆ ನೀಡಿದರು
ಪಟ್ಟಣದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ನವರ ನೂತನ ಮನೆಯ ಗೃಹ ಪ್ರವೇಶಕ್ಕೆ ಆಗಮಿಸಿ ನಂತರ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ತಾಲೂಕು ವೀರಶೈವ ಲಿಂಗಾಯಿತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂಧನೆ ಸ್ವೀಕರಿಸಿ ಮಾತನಾಡಿದ ಅವರು ಹುಟ್ಟು ಅಕಸ್ಮಿಕ ಸಾವು ನಿಶ್ಚಿತ ಈ ನಡುವೆ ಬದುಕುವ ನಾವುಗಳು ಜನಮಾನಸದಲ್ಲಿ ಉಳಿಯುವಂತಹ ಕೆಲಸಗಳನ್ನು ದಕ್ಷತೆ ಮತ್ತು ಪ್ರಮಾಣಿಕತೆಯಿಂದ ಮಾಡಬೇಕೆಂದು ಎಲ್ಲ ನೌಕರರಿಗೂ ಕಿವಿಮಾತು ಹೇಳಿದರು.
ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದ ನಾನು ನನಗೆ ಸಿಕ್ಕ ಅವಕಾಶಗಳನ್ನು ಬಸವಣ್ಣನವರ ತತ್ವ ಸಂದೇಶಗಳನ್ನು ಅಳವಡಿಸಕೊಂಡು ಬಿಡುವಿಲ್ಲದಂತೆ ಪ್ರಮಾಣಿಕ ಸೇವೆ ನೀಡುತ್ತಿದ್ದೆನೆ ಸಿಕ್ಕ ಅವಕಾಶದ ದಿನದಲ್ಲಿ ನಮ್ಮದ ಆದ ಹೆಜ್ಜೆ ಗುರತು ಇಟ್ಟು ಹೋಗಬೇಕು.ಅಧಿಕಾರದಲ್ಲಿದ್ದಾಗ ಶಾಸ್ತ್ರತವಾದ ಜನರಲ್ಲಿ ಉಳಿಯವಂತಹ ಸೇವೆ ನೀಡಬೇಕು ಎಂದ ಅವರು ನಮಗಿಂತ ಕಳಗಿದ್ದವರನ್ನು ನೋಡಿ ಕಲಿಯಬೇಕು ಅದನ್ನು ಬಿಟ್ಟು ನಮಗಿಂತ ಎತ್ತರದಲ್ಲಿರುವವರನ್ನು ನೋಡಿದರೆ ದಾರಿ ತಪ್ಪಬೇಕಾಗುತ್ತದೆ ಎಂದ ಅವರು ನಮ್ಮ ಆತ್ಮಸಾಕ್ಷಿಗೆ ಒಪ್ಪುವಂತಹ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡೋಣವೆಂದರು.
ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವು 25ನೇ ವರ್ಷ ಪೂರೈಸಿರುವುದು ಸಂತ ತಂದಿದೆ. ಅಡಳಿತ ಮಂಡಳಿಯವರು ಅದಷ್ಟು ಕಡಿಮೆ ಬಡ್ಡಿ ದರದಲಲಿ ಸಾಲ ನೀಡುವಂತಾಗಬೇಕು,ಕೇವಲ 75 ಸಾವಿರಕ್ಕೆ ಸಾಲ ಮಿತಿಗೊಳಿಸದೆ ಸಮುದಾಯದ ಜನರಿಗೆ ನೆರವಾಗುವಂತ ಅಭರಣಗೃಹ ಸಾಲಗಳನ್ನು ಹೆಚ್ಚಾಗಿ ನೀಡಬೇಕು. ನಿಶ್ಚಿತ ಠೇವಣಿ ಹೆಚ್ಚಾಗಿ ಸಂಗ್ರಹಿಸಿ ಜನಸಾಮನ್ಯರಿಗೂ ನೆರವಾಗುವಂತೆ ಹೆಚ್ಚಿನ ವಹಿವಾಟು ನಡೆಸುವಂತೆ ಸಲಹೆ ನೀಡಿದ ಅವರು ಈಗಾಗಲೇ ನಿಮಿಸಿರುವ ಶ್ರೀ ಬಸವೇಶ್ವರ ರಜತ ಭವನವನ್ನು ಬಾಡಿಗೆಗೆ ನೀಡುವಲ್ಲಿ ತ್ವರಿತ ಕ್ರಮವಹಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೃಷಬೇಂದ್ರಪ್ಪ,ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೌಕರರ ಹರ್ಷಗಿರಿಗೌಡ,ಸಂಭುಗೌಡ.ಸೋಮಶೇಖರ್ ವಿಜಯ್ ಕುಮಾರ್ ಜಯರಾಮು ಸೇರಿದಂತೆ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು,ತಾಲೂಕು ನೌಕರರು ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.
Повторяем попытку...
Доступные форматы для скачивания:
Скачать видео
-
Информация по загрузке: