ಹೆಸರಾಂತ ಶಿವಮೊಗ್ಗ ಹಿಂದೂ ಮಹಾಗಣಪತಿ ಉತ್ಸವ ; ನಗರದೆಲ್ಲೆಡೆ ಕೇಸರಿ ಬಾವುಟದ ರಂಗು!|Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2023-09-27
Просмотров: 7132
Описание:
ಐತಿಹಾಸಿಕ ಪ್ರಸಿದ್ಧ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ, ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯವಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ನಗರದಲ್ಲೆಡೆ ಅದ್ದೂರಿ ಆಲಂಕಾರ ಮಾಡಲಾಗಿದೆ. ಗಣಪತಿ ರಾಜಬೀದಿ ಉತ್ಸವ ಸಾಗುವ ಮಾರ್ಗದುದ್ದಕ್ಕೂ ಕೇಸರಿ ರಾರಾಜಿಸುತ್ತಿದೆ. ಕೋಟೆ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ ಹಾಗೂ ದ್ವಾರ, ನೆಹರೂ ರಸ್ತೆ ಹಿಂದುತ್ವ ಸಾರುತ್ತಿವೆ. ಎಲ್ಲೆಡೆ ಕೇಸರಿ ಬಂಟಿಂಗ್ಸ್, ಕಟೌಟ್ ಹಾಗೂ ತೋರಣ ಹಾಕಲಾಗಿದೆ.
ಪ್ರತೀ ವರ್ಷದಂತೆ ಈ ಸಲವೂ ಗಾಂಧಿಬಜಾರ್ ಮುಖ್ಯ ದ್ವಾರದಲ್ಲಿ ಆಕೃತಿ ನಿರ್ಮಾಣ ಮಾಡಲಾಗಿದೆ. ಈ ವರ್ಷ ಉಗ್ರ ನರಸಿಂಹನ ಅವತಾರ ಪ್ರತಿಷ್ಠಾಪಿಸಲಾಗಿದೆ. ಹೇಳದೇ ಇರುವ ಸಂದೇಶ ಸಾರುವ ಈ ಕಲಾಕೃತಿ ಜನಾಕರ್ಷಣೆ ಕೇಂದ್ರಬಿಂದುವಾಗಿದೆ. ಜೊತೆಗೆ ಶಿವಪ್ಪನಾಯಕ ವೃತ್ತದ ಬಳಿ ಶ್ರೀರಾಮ, ಆಂಜನೇಯ ಹಾಗೂ ಶಿವಾಜಿ ಮಹಾರಾಜರ ವಿಗ್ರಹ ಸ್ಥಾಪಿಸಲಾಗಿದೆ. ನಗರದ ಅಮಿರ್ ಅಹಮದ್ ವೃತ್ತದಲ್ಲಿ ಚಂದ್ರಯಾನದ ಮಾಡೆಲ್ ಕೂಡ ಇದೆ.
ಗುರುವಾರ ಮುಂಜಾನೆ 11.30ಕ್ಕೆ ಆರಂಭವಾಗುವ ಹಿಂದೂ ಮಹಾಸಭಾ ಗಣೇಶ ವಿರ್ಸಜನೆ, ತಡ ರಾತ್ರಿವರೆಗೂ ಶಿವಮೊಗ್ಗದ ವಿವಿಧೆಡೆ ಸಾಗಲಿದೆ. ವಿಶ್ವ ಹಿಂದೂ ಪರಿಷತ್ನಿಂದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ಗಣಪತಿ ಎಂದರೆ ರಾಜ್ಯದಲ್ಲೇ ಅದ್ಧೂರಿ ಉತ್ಸವ.
#shivamogga #ganeshchaturthi #hindumahasabha
Our Website : https://Vijaykarnataka.com
Facebook: / vijaykarnataka
Twitter: / vijaykarnataka
Our Video Website: https://kannada.timesxp.com/
Повторяем попытку...
Доступные форматы для скачивания:
Скачать видео
-
Информация по загрузке: