Thaayi Sattha mele Lyrical Video Song | Manjula Gururaj | B V Srinivas | Kannada Janapada Geethe
Автор: Lahari Bhavageethegalu & Folk
Загружено: 2019-03-27
Просмотров: 11663312
Описание:
Lahari Bhavagethegalu & Folk Kannada Presents Kannada Janapada Geethe By Manjula Gururaj Super Hit Song "Thaayi Satha mele" Audio Song Music Composed by B V Srinivas.
Subscribe to our YouTube Channel : / @laharibhavageethegalu
-----------------------------
Song: Thaayi Satha mele
Program: Chellidaru Malligeyaa Part 2
Singer: Manjula Gururaj
Music Director: B V Srinivas
Lyricist: Folk Songs
Music Label : Lahari Music
--------------------------
Listen Now On:
JioSaavn: https://www.jiosaavn.com/song/thaayi-...
Spotify: https://open.spotify.com/track/4GXNTt...
Hungama: https://www.hungama.com/song/thaayi-s...
Gaana: https://gaana.com/song/thaayi-sathamele
Apple Music: / thaayi-sathamele-from-chellidaru-malligeya...
Amazon Prime Music: https://music.amazon.in/albums/B079VZ...
Wynk: https://wynk.in/u/osB7xo9H1
Resso:
--------------------------------------------
Kannada Lyrics (ಕನ್ನಡ ಸಾಹಿತ್ಯ)
ಪಲ್ಲವಿ:
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಚರಣ 1:
ಬಹಳ ಮಕ್ಕಳ ಬಡತನ ಸಂಸಾರ ನನ್ನ ನಸೀಬದಾಗ
ಏನು ಮಾಡುವುದು ಬರೆದು ಕಳಿಸ್ಯಾನ, ಕರುಣೆ ಇಲ್ಲಾ ಶಿವಗ
ಸೀರೆಯ ತವರಿಗೆ ತುತ್ತು ಕೂಳಿಗೆ ನಾ ಹೋಗಿರಲಿಲ್ಲ
ಸೀರೆಯ ತವರಿಗೆ ತುತ್ತು ಕೂಳಿಗೆ ನಾ ಹೋಗಿರಲಿಲ್ಲ
ಕರುಳು ತಡೆಯದೆ ಅಣ್ಣನ ನೋಡಲು ಹೊರಟು ಬಂದೆನಲ್ಲ, ಹೊರಟು ಬಂದೆನಲ್ಲ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಚರಣ 2:
ಕೈಯಾಗ ಒಂದು ಬಗಲಾಗ ಒಂದು ಕೂಸನು ಕಟ್ಟಿಕೊಂಡು
ಹರಗರಿಯುತ್ತಾ ಉಸಿರು ಹಾಕುತ್ತಾ ಬಂದೆ ನಡ್ಕೊಂಡು
ತವರಿನ ಹೊಸ್ತಿಲು ತುಳಿಯೋದರೊಳಗ ಅಣ್ಣನ ಹೆಂಡತಿಯು
ತವರಿನ ಹೊಸ್ತಿಲು ತುಳಿಯೋದರೊಳಗ ಅಣ್ಣನ ಹೆಂಡತಿಯು
ಕಂಡರು ಕಾಣದಂಗೆ ಒಳಗೆ ಹೋದಳು ಮೂತಿ ತಿರುವಿಕೊಂಡು, ಮೂತಿ ತಿರುವಿಕೊಂಡು
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಚರಣ 3:
ನೆತ್ತಿಯ ಮ್ಯಾಲೆ ಬಿಸಿಲು ಬಂದಿತ್ತು ಮಕ್ಕಳು ಚಡಪಡಿಸಿ
ನೀರಿಗಾಗಿ ಕಣ್ಣೀರು ಹಾಕುತಾ ಅತ್ತವು ತಳಮಳಿಸಿ
ಹುಟ್ಟಿ ಬೆಳೆದ ನನ್ನ ತವರಲಿ ಇಂದು ನೀರಿಗು ಗತಿಯಿಲ್ಲ
ಹುಟ್ಟಿ ಬೆಳೆದ ನನ್ನ ತವರಲಿ ಇಂದು ನೀರಿಗು ಗತಿಯಿಲ್ಲ
ಬಾ ನನ್ನ ಮಗಳೇ ಯಾವಾಗ ಬಂದೆ ಎನ್ನುವ ಕರುಳಿಲ್ಲ, ಎನ್ನುವ ಕರುಳಿಲ್ಲ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಚರಣ 4:
ಕೆಲಸದ ಮೇಲೆ ಹೋಗಿದ್ದ ಅಣ್ಣಯ್ಯ ಮನೆಗೆ ಬಂದಿದ್ದ
ದಿಕ್ಕು ಇಲ್ಲದ ತಂಗಿಯ ನೋಡಿ ಬಿಕ್ಕುತ ನಿಂತಿದ್ದ
ಮನಸು ಒಳಗೆ ಕಾಲಿಡಬೇಡೆಂದರು ಹಸಿದ ಮಕ್ಕಳನು ನೋಡಿ
ಮನಸು ಒಳಗೆ ಕಾಲಿಡಬೇಡೆಂದರು ಹಸಿದ ಮಕ್ಕಳನು ನೋಡಿ
ಒಲ್ಲದ ಮನಸಲಿ ಒಳಗೆ ಹೋದೆನು ಅಣ್ಣನ ಜೊತೆಗೂಡಿ, ಅಣ್ಣನ ಜೊತೆಗೂಡಿ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಚರಣ 5:
ಒಳಗೆ ಹೋದ ಅಣ್ಣಗ ಅತ್ತಿಗೆ ಕಿವಿಯಾಗ ಹೇಳ್ಯಾಳ
ಬಾಯಿ ಮುಚ್ಚಿ ಸುಮ್ಮ ಕೂಡುವಂಗ ಆಕಿ ತಲೆಯಾಗ ತುಂಬ್ಯಾಳ
ಗಂಡ ಹೆಂಡಿರು ಉಂಡ ಎಂಜಲ ಮಕ್ಕಳಿಗೆ ಕೊಡುವಾಗ
ಗಂಡ ಹೆಂಡಿರು ಉಂಡ ಎಂಜಲ ಮಕ್ಕಳಿಗೆ ಕೊಡುವಾಗ
ತಾಯಿ ಇದ್ದರೆ ನನಗೆ ಈ ಗತಿ ಬರುತಲೆ ಇರಲಿಲ್ಲ, ಬರುತಲೆ ಇರಲಿಲ್ಲ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ನನ್ನ ಬಾಳು ಕೇಳಮ್ಮ
----------------------------------------------
Enjoy & stay connected with us!!
Subscribe to our YouTube Channel : / @laharibhavageethegalu
Follow us on Instagram: / laharimusic
Like us on Facebook: / laharimusic
Follow Us on Twitter: / laharimusic
Повторяем попытку...
Доступные форматы для скачивания:
Скачать видео
-
Информация по загрузке: