Badami Railway Station And Kudachi Railway Line Developments… |
Автор: Sharanu MB
Загружено: 2024-05-05
Просмотров: 13622
Описание:
ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ಸರಕಾರ ಬಂದಾಗಿನಿಂದ ಭಾರತೀಯ ರೈಲ್ವೇಯ ಅಭಿವೃದ್ದಿಯ ದೆಶೆಯೆ ಬದಲಾಗಿದೆ, ಅದರ ಭಾಗವಾಗಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲೂ ಸಂಸದರಾದ ಪಿ.ಸಿ. ಗದ್ದಿಗೌಡರ ಅವರ ಶ್ರಮದಿಂದ ರೈಲ್ವೆ ಇಲಾಖೆಯಲ್ಸಿ ನಿರಂತರವಾಗಿ ಪ್ರಗತಿಯ ಕಾರ್ಯಗಳು ನಡೆಯುತ್ತಿವೆ.
ಬಾಗಲಕೋಟೆ-ಕುಡಚಿ ಮಾರ್ಗವು 2010-11 ರಲ್ಲಿ ಈ ಯೋಜನೆಗೆ ಮಂಜೂರಾತಿ ದೊರಕಿದ್ದು, ನಮ್ಮ ಬಿಜೆಪಿ ಸರಕಾರ ಕೇಂದ್ರದಲ್ಲಿ ಬಂದ ನಂತರ ಬಾಗಲಕೋಟೆ-ಕುಡಚಿ ಮಾರ್ಗದ ಕಾಮಗಾರಿಗೆ ವೇಗ ನೀಡಿ, ಬಾಗಲಕೋಟೆಯಿಂದ ಖಜ್ಜಿಡೋಣಿಯವರೆಗೆ ರೈಲ್ವೆ ಮಾರ್ಗ 2018 ರಲ್ಲಿ ಪೂರ್ಣಗೊಂಡು, ರೈಲ್ಬಸ್ ಸಂಚಾರ ಪ್ರಾರಂಭಿಸಲಾಗಿತ್ತು, ಈಗ ಮುಂದಿನ ಹಂತದ ಕಾಮಗಾರಿಗಳು ತೀವ್ರಗತಿಯಲ್ಲಿ ಸಾಗಿದ್ದು, ಅದರ ಮುಂದುವರೆದ ಭಾಗ ಖಜ್ಜಿಡೋಣಿ ಯಿಂದ ಲೋಕಾಪೂರ ಮಾರ್ಗದ ಕಾಮಗಾರಿಯು ಭರದಿಂದ ಸಾಗಿದೆ. ಬಾಗಲಕೋಟೆ-ಕುಡಚಿ ಮಾರ್ಗದ ಕಾಮಗಾರಿಯು 2026 ರ ಅಂತ್ಯದಲ್ಲಿ ವರೆಗೆ ಪೂರ್ಣಗೊಳ್ಳಲಿದೆ.
ಗದಗ-ಹುಟಗಿ ಡಬ್ಲಿಂಗ್ ಕಾಮಗಾರಿ ಪ್ರಾರಂಭವಾಗಿದ್ದು, ಕೇಂದ್ರ ಸರಕಾರದಿಂದ ರೂ. 1616 ಕೋಟಿ ಮಂಜೂರಾಗಿದೆ, ಬಾಗಲಕೋಟೆ ಭಾಗದ ಕಾಮಗಾರಿ ಸಂಪೂರ್ಣ ಹಂತದಲ್ಲಿ ಪೂರ್ಣಗೊಡು ವಿದ್ಯುತ್ತೀಕರಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನಿ ಸಂಖ್ಯೆಯಲ್ಲಿ ರೈಲ್ವೇಗಳ ಒಡಾಟಕ್ಕೆ ಅನೂಕೂಲವಾಗಲಿದೆ.
ಅಮೃತ ಭಾರತ ಯೋಜನೆ ಅಡಿ ಬಾದಾಮಿ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳಿಗೆ ಮಾನ್ಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ.ನರೇಂದ್ರ ಮೋದಿಯವರು ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು.
ಬಾದಾಮಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೆ ರೂ.೧೫.೨೧ಕೋಟಿ ಮಂಜೂರಾಗಿದ್ದು, ಈ ಮೊತ್ತದಲ್ಲಿ ಪ್ಲಾಟ್ ಫರ್ಮ ಶೆಲ್ಟರ್, ಪಾರ್ಕಿಂಗ್, ಗಾರ್ಡನ್, ಎಸ್ಕಲೇಟರ್, ಲಿಪ್ಟ್, ಇನ್ನೂಳಿದ ಆಧುನಿಕ ಸೌಲಭ್ಯವನ್ನು ನೀಡಲಾಗುವುದು.
ಇದರೊಂದಿಗೊ ಚಾಲುಕ್ಯರ ರಾಜದಾನಿ ಬಾದಾಮಿಗೆ ಪ್ರವಾಸಿಗರನ್ನು ಸೆಳೆಯುವತ್ತ ಹಾಗೂ ಸುಗಮ ಸಂಚಾರಕ್ಕೆ ಸಂಸದರಾದ ಕಾರ್ಯ ನಿರಂತರವಾಗಿದೆ.
ಗುಳೇದಗುಡ್ಡ ರೈಲ್ವೆ ನಿಲ್ದಾಣ , ಬದಾಮಿ ರೈಲ್ವೆ ನಿಲ್ದಾಣ ಹಾಗೂ ಶಿರೂರ ಗೇಟ ಹತ್ತಿರ ರೈಲ್ವೇ ಮೇಲ್ ಸೇತುವೆಗಳು ಮಂಜೂರಾಗಿದ್ದು, ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
ಇದೆಲ್ಲವೂ ರೈಲ್ವೆ ಇಲಾಖೆಯಲ್ಲಿ ನಡೆಸಲಾದ ಕಾಮಗಾರಿಗಳ ಸಣ್ಣ ಝಲಕ್, ಇನ್ನು ಹಲವಾರಿದೆ. ಸದಾ ಪ್ರಗತಿಯಡೆಗೆ ಪಿ.ಸಿ.ಗದ್ದಿಗೌಡರ ಕಾರ್ಯ ನಿರಂತರವಾದ್ದು.
ವಿಕಸಿತ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ಬಂಬಲಿಸೋಣ.
Повторяем попытку...
Доступные форматы для скачивания:
Скачать видео
-
Информация по загрузке: