ಜಿ.ಟಿ ದೇವೇಗೌಡರು ಪಕ್ಷದ್ರೋಹಿ, ಮೋಸಗಾರ
Автор: Indian Tv Karnataka
Загружено: 2026-01-31
Просмотров: 14934
Описание:
ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿ!
ಜಿ.ಟಿ ದೇವೇಗೌಡರು ಪಕ್ಷದ್ರೋಹಿ, ಮೋಸಗಾರ – ಬೆಳವಾಡಿ ಶಿವಮೂರ್ತಿ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಕೂಡ ಆಕಾಂಕ್ಷಿ ಎಂದು ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಶಾಸಕ ಜಿ.ಟಿ ದೇವೇಗೌಡರು ಪಕ್ಷದ್ರೋಹಿ ಹಾಗೂ ಮೋಸಗಾರ ಎಂದು ಆರೋಪಿಸಿದ ಅವರು, ಮೊದಲ ಬಾರಿ ಜೆಡಿಎಸ್ನಿಂದ ಸ್ಪರ್ಧಿಸುವಾಗ ನನ್ನ ಬಳಿ ಬಂದು ಬೆಂಬಲ ಕೇಳಿದ್ದರು. ನನಗೆ ಸಿಕ್ಕಿದ್ದ ಟಿಕೆಟ್ ನಾನೇ ಅವರಿಗೆ ಬಿಟ್ಟುಕೊಟ್ಟೆ ಎಂದು ಹೇಳಿದರು.
ಹಿಂದಿನಿಂದಲೂ ಅವರು ಪಕ್ಷದ್ರೋಹ ಮಾಡುತ್ತಲೇ ಬಂದಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಲಾಗಿತ್ತು.
ಆದರೆ ಈಗ ಜಿ.ಟಿ ದೇವೇಗೌಡರು ಕಾಂಗ್ರೆಸ್ ಹಿಂದೆ ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರಕ್ಕೂ ಪಕ್ಷದ ಕಾರ್ಯಕರ್ತರಿಗೂ ಜಿ.ಟಿ ದೇವೇಗೌಡರಿಂದ ಯಾವುದೇ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023ರ ಚುನಾವಣೆಯಲ್ಲಿ ಕಾಂಗ್ರೆಸ್ನಲ್ಲಿ ಅಪ್ಪ–ಮಗ ಇಬ್ಬರಿಗೂ ಟಿಕೆಟ್ ಕೇಳಿದ್ದರು.
ಎರಡು ಟಿಕೆಟ್ ಸಾಧ್ಯವಿಲ್ಲ ಎಂದಾಗ ಜೆಡಿಎಸ್ನಲ್ಲೇ ಉಳಿದರು ಎಂದು ಹೇಳಿದರು.
ಕುಮಾರಣ್ಣನ ಮಾತಿಗೆ ಬೆಲೆ ಕೊಟ್ಟು ಅವರು ಬದಲಾಗುತ್ತಾರೆ ಎಂಬ ನಂಬಿಕೆಯಿಂದ ಬೆಂಬಲಿಸಿದ್ದೆವು.
ಆದರೆ ಈಗ ಮತ್ತೆ ಅದೇ ಚಾಳಿ ಮುಂದುವರೆದರೆ ಒಪ್ಪಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಾ.ರ ಮಹೇಶ್ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದರೂ,
ಅವರು ಸ್ವತಃ ಎಲ್ಲೂ ಸ್ಪರ್ಧೆ ಘೋಷಣೆ ಮಾಡಿಲ್ಲ.
ಒಂದು ವೇಳೆ ಅವರು ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಬೆಳವಾಡಿ ಶಿವಮೂರ್ತಿ ಹೇಳಿದರು.
ಇಂಡಿಯನ್ ಟಿವಿಯೊಂದಿಗೆ ಮಾತನಾಡುವ ವೇಳೆ ಜಿ.ಟಿ ದೇವೇಗೌಡರ ವಿರುದ್ಧ ಜೆಡಿಎಸ್ ನಾಯಕ ಬೆಳವಾಡಿ ಶಿವಮೂರ್ತಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
#️⃣ HASHTAGS
#Chamundeshwari
#BelavadiShivamurthy
#GTDevegowda
#JDSPolitics
#MysuruPolitics
#KarnatakaPolitics
#PoliticalWar
#PartyDefection
#BreakingPolitics
#AssemblyElections
#PoliticalStatement
#JDSSplit
#PowerStruggle
#IndianTV
#gtdevegowda
Повторяем попытку...
Доступные форматы для скачивания:
Скачать видео
-
Информация по загрузке: