ಅಂತರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ | ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
Автор: DD Chandana News
Загружено: 2026-02-13
Просмотров: 7
Описание:
ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನಕ್ಕಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ಜಲಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ಜಲ ನಿರ್ವಹಣೆಗೆ ಸಂಬಂಧಿಸಿದ ಕೆಲವು ಕೈಪಿಡಿಗಳನ್ನು ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಬಿಡುಗಡೆ ಮಾಡಿದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿರುವ ಹೆಚ್ಚಿನ ಅಣೆಕಟ್ಟುಗಳು ದಶಕಗಳಷ್ಟು ಹಳೆಯವು. ಇವುಗಳ ಸುರಕ್ಷತೆಯು ಕೇವಲ ಇಂಜಿನಿಯರಿಂಗ್ ವಿಷಯವಲ್ಲ, ಇದು ಲಕ್ಷಾಂತರ ರೈತರ ಬದುಕು ಮತ್ತು ಸಾರ್ವಜನಿಕರ ಆಸ್ತಿಪಾಸ್ತಿಯ ರಕ್ಷಣೆ ವಿಷಯವಾಗಿದೆ. ನಮ್ಮ ಸರ್ಕಾರ ಹಳೆಯ ಅಣೆಕಟ್ಟುಗಳ ಆಧುನೀಕರಣಕ್ಕೆ ಬದ್ಧವಾಗಿದೆ. ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎಂದು ಜವಹರಲಾಲ್ ನೆಹರೂ ಹೇಳಿದ್ದರು. ಆ ದೇವಾಲಯಗಳ ಸುರಕ್ಷತೆ ಕಾಯುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಸರ್ಕಾರವು ಜನರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಸುಮಾರು 230ಕ್ಕೂ ಹೆಚ್ಚು ಅಣೆಕಟ್ಟುಗಳು ರಾಜ್ಯದಲ್ಲಿದ್ದು, ದೇಶದಲ್ಲೇ ಇವು 6ನೇ ಸ್ಥಾನದಲ್ಲಿದೆ. 4 ಸಾವಿರದ 800 ಮೆಗಾ ವ್ಯಾಟ್ ಹೈಡ್ರೋ ಪವರ್ ಉತ್ಪಾದನೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಡಿ.ಕೆ ಶಿವಕುಮಾರ್, ಸಮ್ಮೇಳನದಲ್ಲಿ 10ಕ್ಕೂ ಹೆಚ್ಚು ದೇಶಗಳ ಸುಮಾರು 25 ಅಂತಾರಾಷ್ಟ್ರೀಯ ತಜ್ಞರು ಮತ್ತು ದೇಶಾದ್ಯಂತದ 400ಕ್ಕೂ ಹೆಚ್ಚು ಇಂಜಿನಿಯರ್ಗಳು ಹಾಗೂ ಸಂಶೋಧಕರು ಭಾಗವಹಿಸಿದ್ದಾರೆ. ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಒಟ್ಟು 46 ಅತ್ಯಾಧುನಿಕ ಸಂಶೋಧನಾ ವರದಿಗಳನ್ನು ಈ ಎರಡು ದಿನಗಳಲ್ಲಿ ಮಂಡಿಸಲಾಗುವುದು. ಕರ್ನಾಟಕದ 58 ಅಣೆಕಟ್ಟುಗಳ ಸುರಕ್ಷತೆಗಾಗಿ 1ಸಾವಿರದ 500 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನೀರಾವರಿ ಎಂದರೆ ಕೇವಲ ಕಾಲುವೆಗಳಲ್ಲ, ಅದು ಅಣೆಕಟ್ಟುಗಳ ಭದ್ರತೆಯಿಂದ ಆರಂಭವಾಗುತ್ತದೆ. ಅಣೆಕಟ್ಟು ಸುರಕ್ಷಿತವಾಗಿದ್ದರೆ ಮಾತ್ರ ರೈತರು ಮತ್ತು ರಾಜ್ಯದ ಜನತೆ ಸುರಕ್ಷಿತವಾಗಿರಲು ಸಾಧ್ಯ. ತಂತ್ರಜ್ಞಾನ ಮತ್ತು ತಜ್ಞರ ಅನುಭವದೊಂದಿಗೆ ನಾವು ಕರ್ನಾಟಕದ ಜಲಸಂಪನ್ಮೂಲವನ್ನು ರಕ್ಷಿಸುತ್ತೇವೆ ಎಂದರು.
ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜಭೂಷಣ್ ಚೌಧರಿ, ಈ ಅಂತಾರಾಷ್ಟ್ರೀಯ ಸಮ್ಮೇಳನವು ಜಗತ್ತಿನಾದ್ಯಂತ ಇರುವ ಅಣೆಕಟ್ಟುಗಳ ಸುರಕ್ಷತೆ, ನಿರ್ವಹಣೆ ಮತ್ತು ನವೀನ ತಂತ್ರಜ್ಞಾನಗಳ ವಿನಿಮಯಕ್ಕೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಣೆಕಟ್ಟು ಸುರಕ್ಷತಾ ಕಾಯ್ದೆ ಅಡಿಯಲ್ಲಿ ದೇಶದ ಪ್ರತಿಯೊಂದು ಅಣೆಕಟ್ಟಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆ. ರಾಜ್ಯ ಸರ್ಕಾರಗಳು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಂಭಾವ್ಯ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: