ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಅಂತರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ | ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Автор: DD Chandana News

Загружено: 2026-02-13

Просмотров: 7

Описание: ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನಕ್ಕಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ಜಲಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ಜಲ ನಿರ್ವಹಣೆಗೆ ಸಂಬಂಧಿಸಿದ ಕೆಲವು ಕೈಪಿಡಿಗಳನ್ನು ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಬಿಡುಗಡೆ ಮಾಡಿದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿರುವ ಹೆಚ್ಚಿನ ಅಣೆಕಟ್ಟುಗಳು ದಶಕಗಳಷ್ಟು ಹಳೆಯವು. ಇವುಗಳ ಸುರಕ್ಷತೆಯು ಕೇವಲ ಇಂಜಿನಿಯರಿಂಗ್ ವಿಷಯವಲ್ಲ, ಇದು ಲಕ್ಷಾಂತರ ರೈತರ ಬದುಕು ಮತ್ತು ಸಾರ್ವಜನಿಕರ ಆಸ್ತಿಪಾಸ್ತಿಯ ರಕ್ಷಣೆ ವಿಷಯವಾಗಿದೆ. ನಮ್ಮ ಸರ್ಕಾರ ಹಳೆಯ ಅಣೆಕಟ್ಟುಗಳ ಆಧುನೀಕರಣಕ್ಕೆ ಬದ್ಧವಾಗಿದೆ. ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎಂದು ಜವಹರಲಾಲ್ ನೆಹರೂ ಹೇಳಿದ್ದರು. ಆ ದೇವಾಲಯಗಳ ಸುರಕ್ಷತೆ ಕಾಯುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಸರ್ಕಾರವು ಜನರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಸುಮಾರು 230ಕ್ಕೂ ಹೆಚ್ಚು ಅಣೆಕಟ್ಟುಗಳು ರಾಜ್ಯದಲ್ಲಿದ್ದು, ದೇಶದಲ್ಲೇ ಇವು 6ನೇ ಸ್ಥಾನದಲ್ಲಿದೆ. 4 ಸಾವಿರದ 800 ಮೆಗಾ ವ್ಯಾಟ್ ಹೈಡ್ರೋ ಪವರ್ ಉತ್ಪಾದನೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಡಿ.ಕೆ ಶಿವಕುಮಾರ್, ಸಮ್ಮೇಳನದಲ್ಲಿ 10ಕ್ಕೂ ಹೆಚ್ಚು ದೇಶಗಳ ಸುಮಾರು 25 ಅಂತಾರಾಷ್ಟ್ರೀಯ ತಜ್ಞರು ಮತ್ತು ದೇಶಾದ್ಯಂತದ 400ಕ್ಕೂ ಹೆಚ್ಚು ಇಂಜಿನಿಯರ್‌ಗಳು ಹಾಗೂ ಸಂಶೋಧಕರು ಭಾಗವಹಿಸಿದ್ದಾರೆ. ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಒಟ್ಟು 46 ಅತ್ಯಾಧುನಿಕ ಸಂಶೋಧನಾ ವರದಿಗಳನ್ನು ಈ ಎರಡು ದಿನಗಳಲ್ಲಿ ಮಂಡಿಸಲಾಗುವುದು. ಕರ್ನಾಟಕದ 58 ಅಣೆಕಟ್ಟುಗಳ ಸುರಕ್ಷತೆಗಾಗಿ 1ಸಾವಿರದ 500 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನೀರಾವರಿ ಎಂದರೆ ಕೇವಲ ಕಾಲುವೆಗಳಲ್ಲ, ಅದು ಅಣೆಕಟ್ಟುಗಳ ಭದ್ರತೆಯಿಂದ ಆರಂಭವಾಗುತ್ತದೆ. ಅಣೆಕಟ್ಟು ಸುರಕ್ಷಿತವಾಗಿದ್ದರೆ ಮಾತ್ರ ರೈತರು ಮತ್ತು ರಾಜ್ಯದ ಜನತೆ ಸುರಕ್ಷಿತವಾಗಿರಲು ಸಾಧ್ಯ. ತಂತ್ರಜ್ಞಾನ ಮತ್ತು ತಜ್ಞರ ಅನುಭವದೊಂದಿಗೆ ನಾವು ಕರ್ನಾಟಕದ ಜಲಸಂಪನ್ಮೂಲವನ್ನು ರಕ್ಷಿಸುತ್ತೇವೆ ಎಂದರು.

ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜಭೂಷಣ್ ಚೌಧರಿ, ಈ ಅಂತಾರಾಷ್ಟ್ರೀಯ ಸಮ್ಮೇಳನವು ಜಗತ್ತಿನಾದ್ಯಂತ ಇರುವ ಅಣೆಕಟ್ಟುಗಳ ಸುರಕ್ಷತೆ, ನಿರ್ವಹಣೆ ಮತ್ತು ನವೀನ ತಂತ್ರಜ್ಞಾನಗಳ ವಿನಿಮಯಕ್ಕೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಣೆಕಟ್ಟು ಸುರಕ್ಷತಾ ಕಾಯ್ದೆ ಅಡಿಯಲ್ಲಿ ದೇಶದ ಪ್ರತಿಯೊಂದು ಅಣೆಕಟ್ಟಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆ. ರಾಜ್ಯ ಸರ್ಕಾರಗಳು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಂಭಾವ್ಯ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅಂತರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ | ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

LIVE :  DK Shivakumar  | ಸಿಎಂ ಕುರ್ಚಿಗಾಗಿ ಬಹಿರಂಗವಾಗಿ ಅಖಾಡಕ್ಕಿಳಿದ ಡಿಕೆ.!..!? | R Maxx Kannada

LIVE : DK Shivakumar | ಸಿಎಂ ಕುರ್ಚಿಗಾಗಿ ಬಹಿರಂಗವಾಗಿ ಅಖಾಡಕ್ಕಿಳಿದ ಡಿಕೆ.!..!? | R Maxx Kannada

ವಿಚಾರಣಾಧೀನ ಕೈದಿಗಳ ಮತದಾನಕ್ಕೆ ಮನವಿ | ಸಾಂಪ್ರದಾಯಿಕ ಉದ್ಯೋಗಗಳಿಗೆ  ಸಾಲ ಸೌಲಭ್ಯ

ವಿಚಾರಣಾಧೀನ ಕೈದಿಗಳ ಮತದಾನಕ್ಕೆ ಮನವಿ | ಸಾಂಪ್ರದಾಯಿಕ ಉದ್ಯೋಗಗಳಿಗೆ ಸಾಲ ಸೌಲಭ್ಯ

Визуализация гравитации

Визуализация гравитации

ಪ್ರಧಾನಿ ಸೇವಾ ತೀರ್ಥ ಸಂಕೀರ್ಣ ಅನಾವರಣ | ಒಂದೇ ಸೂರಿನಡಿ ಹಲವು ಸಚಿವಾಲಯಗಳು

ಪ್ರಧಾನಿ ಸೇವಾ ತೀರ್ಥ ಸಂಕೀರ್ಣ ಅನಾವರಣ | ಒಂದೇ ಸೂರಿನಡಿ ಹಲವು ಸಚಿವಾಲಯಗಳು

Воюющий политолог Сазонов: Только что! Трамп принял решение! Путин обречён!

Воюющий политолог Сазонов: Только что! Трамп принял решение! Путин обречён!

Avadhootha Sri Vinay Guruji EXCLUSIVE: ವಿನಯ್​ ಗುರೂಜಿ ಮಾತಿಗೆ ಮುಸ್ಲಿಮರಿಂದ ಚಪ್ಪಾಳೆ..

Avadhootha Sri Vinay Guruji EXCLUSIVE: ವಿನಯ್​ ಗುರೂಜಿ ಮಾತಿಗೆ ಮುಸ್ಲಿಮರಿಂದ ಚಪ್ಪಾಳೆ..

Фейгин: Срочно! Убойный компромат Эпштейна на Трампа уже у Путина! Там ужас!

Фейгин: Срочно! Убойный компромат Эпштейна на Трампа уже у Путина! Там ужас!

ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ | ಅಣೆಕಟ್ಟುಗಳ ಸುರಕ್ಷತೆ, ನಿರ್ವಹಣೆಗೆ ಸರ್ಕಾರ ಬದ್ಧ

ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ | ಅಣೆಕಟ್ಟುಗಳ ಸುರಕ್ಷತೆ, ನಿರ್ವಹಣೆಗೆ ಸರ್ಕಾರ ಬದ್ಧ

Первый старт самой большой европейской ракеты современности: Ariane 64

Первый старт самой большой европейской ракеты современности: Ariane 64

Невозможный Мир под Песками Сахары

Невозможный Мир под Песками Сахары

🔴LIVE : ಬೈರತಿಗೆ ‘ಬಿಕ್ಲು’ ಕಂಟಕ |ಚಿನ್ನಸ್ವಾಮಿಗೆ ‘ಕಂಡೀಷನ್ಸ್’ ಅಪ್ಲೈ |Power Focus With Rakesh Shetty | PTV

🔴LIVE : ಬೈರತಿಗೆ ‘ಬಿಕ್ಲು’ ಕಂಟಕ |ಚಿನ್ನಸ್ವಾಮಿಗೆ ‘ಕಂಡೀಷನ್ಸ್’ ಅಪ್ಲೈ |Power Focus With Rakesh Shetty | PTV

Avadhootha Sri Vinay Guruji EXCLUSIVE: ಮಹಿಳೆಯರ ಡ್ರೆಸ್​ ಬಗ್ಗೆ ವಿನಯ್​ ಗುರೂಜಿ ಖಡಕ್​ ಮಾತು!

Avadhootha Sri Vinay Guruji EXCLUSIVE: ಮಹಿಳೆಯರ ಡ್ರೆಸ್​ ಬಗ್ಗೆ ವಿನಯ್​ ಗುರೂಜಿ ಖಡಕ್​ ಮಾತು!

Hosakote Accident: ಬಿರಿಯಾನಿ ಮೋಹಕ್ಕೆ 7 ಮಂದಿ ಬ*ಲಿ? | 7 killed in Hoskote

Hosakote Accident: ಬಿರಿಯಾನಿ ಮೋಹಕ್ಕೆ 7 ಮಂದಿ ಬ*ಲಿ? | 7 killed in Hoskote

ಮುನಿರತ್ನ ಆರೋಗ್ಯ ವಿಚಾರಿಸಿದ ಸಂಸದ ಡಾ.ಮಂಜುನಾಥ್ | Dr.Manjunath | Munirathna | Public TV

ಮುನಿರತ್ನ ಆರೋಗ್ಯ ವಿಚಾರಿಸಿದ ಸಂಸದ ಡಾ.ಮಂಜುನಾಥ್ | Dr.Manjunath | Munirathna | Public TV

АВИЦЕННА ЗНАЛ: ПОЖИЛЫЕ, НЕ МОЙТЕСЬ ТАК! ЭТО КРАДЕТ ГОДЫ ЖИЗНИ!

АВИЦЕННА ЗНАЛ: ПОЖИЛЫЕ, НЕ МОЙТЕСЬ ТАК! ЭТО КРАДЕТ ГОДЫ ЖИЗНИ!

RCB ಸಂಭ್ರಮಾಚರಣೆಯಲ್ಲಿ ಸೂತಕ | Chinnaswamy Stadium Stampede | Public TV

RCB ಸಂಭ್ರಮಾಚರಣೆಯಲ್ಲಿ ಸೂತಕ | Chinnaswamy Stadium Stampede | Public TV

Зеленский принял условия США? / Немедленная смена власти в Киеве?

Зеленский принял условия США? / Немедленная смена власти в Киеве?

Four Stars Of Destiny | ಮೌನ ಮುರಿದ ನರವಾಣೆ, ಪೆಂಗ್ವಿನ್‌ಗೆ ಬೆಂಬಲ! ರಾಹುಲ್ ಗಾಂಧಿಗೆ ಶಾಕ್‌! BJPಗೆ ಹೊಸ ಅಸ್ತ್ರ

Four Stars Of Destiny | ಮೌನ ಮುರಿದ ನರವಾಣೆ, ಪೆಂಗ್ವಿನ್‌ಗೆ ಬೆಂಬಲ! ರಾಹುಲ್ ಗಾಂಧಿಗೆ ಶಾಕ್‌! BJPಗೆ ಹೊಸ ಅಸ್ತ್ರ

'ಶಿಮ್ಲಾ' ಯೂಟರ್ನ್..ಸಿಂಧೂ ಗಾಗಿ ಅದೆಷ್ಟು ಲೆಟರ್..? ಪಾಕಿಸ್ತಾನದಲ್ಲೀಗ ಭಾರತದ ಲೀಡರ್ರೇ ಹೀರೋ..!

'ಶಿಮ್ಲಾ' ಯೂಟರ್ನ್..ಸಿಂಧೂ ಗಾಗಿ ಅದೆಷ್ಟು ಲೆಟರ್..? ಪಾಕಿಸ್ತಾನದಲ್ಲೀಗ ಭಾರತದ ಲೀಡರ್ರೇ ಹೀರೋ..!

66 миллионов лет назад: последний день динозавров

66 миллионов лет назад: последний день динозавров

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]