ಶುಭ ಕಾರ್ಯಕ್ಕೆ ಶ್ರೇಷ್ಠವಾದ ತಿಥಿಗಳು..?
Автор: Spark Live Kannada
Загружено: 2020-04-22
Просмотров: 16411
Описание:
ಜ್ಯೋತಿಷ್ಯಶಾಸ್ತ್ರದಲ್ಲಿ ಮೂರೂವರೆ ಮಹೂರ್ತಗಳನ್ನು (ಯುಗಾದಿಯ ಪಾಡ್ಯ, ಅಕ್ಷಯ ತದಿಗೆ, ವಿಜಯ ದಶಮಿ ಮತ್ತು ಬಲಿ ಪಾಡ್ಯಮಿ) ಅತಿ ಶ್ರೇಷ್ಠವೆನ್ನುತ್ತಾರೆ. ಈ ಮಹೂರ್ತಗಳಿಗೆ ಯಾವುದೇ ದಿನ ದೋಷವಿಲ್ಲ. ಒಂದೊಮ್ಮೆ ಈ ದಿನಗಳಿಗೆ ಹೊಂದಿಕೊಂಡಂತೆ ಗ್ರಹಣವೇನಾದರೂ ಸಂಭವಿಸಿದರೆ ಆಗ ಶುಭ ಕಾರ್ಯಗಳನ್ನು ಮಾಡದಿರುವುದು ಒಳ್ಳೆಯದು. ಧನುರ್ಮಾಸದಲ್ಲಿ ಗೃಹ ಪ್ರವೇಶ, ನೂತನ ಗೃಹ ನಿರ್ಮಾಣ ಕಾರ್ಯಾರಂಭ, ವಿವಾಹ ಮತ್ತಿತರ ಶುಭ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲ. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳನ್ನು ಶುಭವಾರಗಳೆನ್ನುತ್ತಾರೆ. ಶುದ್ಧ ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ, ಏಕಾದಶಿ ಮತ್ತು ತ್ರಯೋದಶಿ ಉತ್ತಮ ತಿಥಿಗಳಾಗಿವೆ. ಅಶ್ವಿನಿ, ಮೃಗಶಿರಾ, ರೋಹಿಣಿ, ಪುನರ್ವಸು, ಪುಷ್ಯ, ಮಾಘ, ಪುಬ್ಬ, ಉತ್ತರ,
ಹಸ್ತ, ಚಿತ್ತ, ಸ್ವಾತಿ, ಅನುರಾಧ, ಮೂಲ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷ, ಉತ್ತರಭಾದ್ರ, ರೇವತಿ ಶುಭ ನಕ್ಷತ್ರಗಳಾಗಿವೆ.
ಐದು ಬಗೆಯ ತಿಥಿಗಳಿವೆ. ಅವೆಂದರೆ, ನಂದಾ, ಭದ್ರ, ಜಯ, ರಿಕ್ತಾ ಮತ್ತು ಪೂರ್ಣ.
ನಂದಾ: ಉತ್ಸವ, ವಾಸ್ತು ಪ್ರತಿಷ್ಠೆ, ಕೃಷಿ ಕಾರ್ಯಾರಂಭ, ಸಂಗೀತಾರಂಭ ಮೊದಲಾದವನ್ನು ಮಾಡಬಹುದು.
ಭದ್ರ: ವಿವಾಹ, ಉಪನಯನ, ಪ್ರಯಾಣ, ಶಾಂತಿ ಕರ್ಮಗಳನ್ನು ಮಾಡುವುದು
ಜಯ: ಯುದ್ಧಾರಂಭ, ವಿವಾಹ, ಉಪನಯನ, ಷೋಡಷ ಸಂಸ್ಕಾರಗಳನ್ನು ಮಾಡಬಹುದು.
ಪೂರ್ಣ: ಮಂಗಳ ಕಾರ್ಯಗಳು, ವಿವಾಹಾದಿ ಶುಭ ಕಾರ್ಯಗಳು, ಯಾತ್ರಾ ಆಗಮನಾದಿ ಶಾಂತಿ ಕರ್ಮಗಳನ್ನು ಮಾಡಬಹುದು.
Повторяем попытку...
Доступные форматы для скачивания:
Скачать видео
-
Информация по загрузке: