ದಲಿತರ ವಿರುದ್ಧ ಕಾನೂನು, ತೀರ್ಪುಗಳನ್ನು ಪರಿಶೀಲಿಸಲು ಸಿಎಂಗೆ ಮನವಿ.
Автор: Bhumika News
Загружено: 2026-03-11
Просмотров: 254
Описание:
ಸುಪ್ರೀಂ ಹಾಗೂ ಹೈಕೋರ್ಟ್ಗಳಲ್ಲಿ ಪಿಟಿಷನ್ ಕಾಯ್ದೆಗೆ ವಿವಿಧ ರೀತಿಯಲ್ಲಿ ದಲಿತರ ವಿರುದ್ಧವಾದ ಕಾನೂನು, ತೀರ್ಪುಗಳನ್ನು ಪರಿಶೀಲಿಸಬೇಕು ಎಂದು ದಸಂಸ ಮುಖಂ ಡರುಗಳು ಜಿಲ್ಲಾಡಳಿತ ಮೂಲಕ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ಗೆ ಮನವಿ ಸಲ್ಲಿಸಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ತರೀ ಕೆರೆ ಎನ್.ವೆಂಕಟೇಶ್ ದಲಿತರ ವಿರುದ್ಧವಾದ ತೀರ್ಪುಗಳಲ್ಲಿ ಮುಖ್ಯಮಂತ್ರಿಗಳು ವಿಧಾನಮಂಡಲ ಚರ್ಚಿ ಸಿ ನ್ಯಾಯ ಒದಗಿಸಿಕೊಡಲು ವ್ಯವಸ್ಥಿತ ಕಾನೂನು ರಚಿಸಬೇಕು ಎಂದರು.
ಪಿಟಿಷನ್ ಕಾಯ್ದೆ ಕೋರ್ಟ್ಗಳಲ್ಲಿ ತೀರ್ಪುಗಳು ಪರಿಶಿಷ್ಟ ಗ್ರಾö್ಯಂಟಿಗಳು ಮೊದಲ ಬಾರಿ ಎ.ಸಿ. ಕೋ ರ್ಟಿಗೆ ಅರ್ಜಿ ಸಲ್ಲಿಸಲು ಕಾಲಮಿತಿ ಅನ್ವಯಿಸುವುದಿಲ್ಲ ಹಾಗೂ ತೀರ್ಪುಗಳ ಹಿನ್ನೆಲೆಯಲ್ಲಿ ತಿದ್ದುಪಡಿಯನ್ನು ತಿರಸ್ಕರಿಸಿ ಆದೇಶಿಸಲಾಗಿದೆ. ಅದರಂತೆ ರಾಜ್ಯಾದ್ಯಂತ ಎ.ಸಿ, ಡಿ.ಸಿ, ಹೈಕೋರ್ಟ್ಗಳು ಪ.ಜಾತಿ ಗ್ರಾö್ಯಂಟಿ ಗಳು ತಡವಾಗಿ ಅರ್ಜಿ ಸಲ್ಲಿಸಿದಾಗ ಅನೇಕ ಕಾರಣಗಳಿಂದ ವಜಾ ಮಾಡಲಾಗುತ್ತಿದೆ ಎಂದು ಹೇಳಿದರು.
ಇದರಿಂದ ರಾಜ್ಯಾದ್ಯಂತ ಸಾವಿರಾರು ಪರಿಶಿಷ್ಟರು ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಈ ಹಿಂದೆ ಪರಿಶಿಷ್ಟ ವಿರುದ್ಧವಾಗಿ ತೀರ್ಪುಗಳು ಬಂದಿವೆ. ಪರಿಶಿಷ್ಟ ಗ್ರಾಂಟಿಗಳು, ಅರ್ಜಿದಾರರು ಮೊದಲ ಬಾರಿಗೆ ತಡವಾಗಿ ಅರ್ಜಿ ಸಲ್ಲಿಸಿದಾಗ ಎಸಿ, ಡಿಸಿ, ಹೈಕೋರ್ಟ್ ಹಾಗೂ ಇತರೆ ನ್ಯಾಯಾಲಯಗಳು ಅರ್ಜಿಗಳನ್ನು ಅನೇಕ ಕಾರಣಕ್ಕೆ ವಜಾಗೊಳಿಸಬಾರದು ಎಂದು ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಆದೇಶವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಮಹಿಳಾ ರಾಜ್ಯ ಸಂಚಾಲಕಿ ಭವಾನಿ, ಸದಸ್ಯ ಟಿ.ಮಂಜಪ್ಪ, ಜಿಲ್ಲಾ ಸಂಚಾ ಲಕ ಭೀಮಯ್ಯ, ಸಂಘಟನಾ ಸಂಚಾಲಕ ನಂಜುAಡಪ್ಪ, ಮುಖಂಡರುಗಳಾದ ಇಲಿಯಾಜ್ ಅಹಮದ್, ಶಿವಕುಮಾರ್ ಹಲಸುಮನೆ ಹಾಜರಿದ್ದರು.
Повторяем попытку...
Доступные форматы для скачивания:
Скачать видео
-
Информация по загрузке: