ದಲಿತ ಸಮುದಾಯವನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್, ಮುಂದಿನ ದಿನಗಳಲ್ಲಿ ತಕ್ಕ ಪಾಠ; ದಂಟರಮಕ್ಕಿ ಶ್ರೀನಿವಾಸ್
Автор: Bhumika News
Загружено: 2026-02-07
Просмотров: 47
Описание:
ಭಾರತ ದೇಶ ಸ್ವತಂತ್ರ ಕಂಡು 78 ವರ್ಷಗಳು ಕಳೆದರೂ ಕೂಡ ರಾಜಕೀಯ ಪಕ್ಷಗಳಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನಗಳು ಲಭಿಸಿಲ್ಲ ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕೂಡ ರಾಜಕೀಯ ತಾರತಮ್ಯ ಅನುಸರಿಸಿ ದಲಿತರಿಗೆ ಯಾವುದೇ ರೀತಿಯ ಸೂಕ್ತ ಸ್ಥಾನಮಾನ ನೀಡದೆ ಸಾಮಾಜಿಕವಾಗಿ ಆರ್ಥಿಕವಾಗಿ ಸಮುದಾಯಗಳ ವ್ಯಕ್ತಿಗಳಿಗೆ ಪಟ್ಟಕಟ್ಟಿ ಮೆರೆಸಲಾಗುತ್ತಿದೆ ಎಂದು ದಂಟರ ಮಕ್ಕಿ ಶ್ರೀನಿವಾಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆಯ ಒಕ್ಕಲಿಗ ಸಮುದಾಯದವರಿಗೆ BCADA ಭದ್ರಾ ಕಮಾಂಡ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ ಅಧ್ಯಕ್ಷರಾಗಿ ಅರಣ್ಯ ಮತ್ತು ಪರಿಸರ ಸಂರಕ್ಷಣಾ ಅಧ್ಯಕ್ಷರಾಗಿ ಕುರುಬ ಸಮುದಾಯದವರನ್ನು ಪಂಚ ಗ್ಯಾರಂಟಿ ಯೋಜನಾ ಅಧ್ಯಕ್ಷರಾಗಿ ಲಿಂಗಾಯತರನ್ನು ಮತ್ತು ಆಹಾರ ಸಂಸ್ಕರಣಾ ಅಧ್ಯಕ್ಷರಾಗಿ ಲಿಂಗಾಯತ ಸಮುದಾಯದವರನ್ನು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕುರುಬ ಸಮುದಾಯದವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಇದೇ ರೀತಿ ನಾಟಕ ನಡೆದಿದೆ, ಹಾಗಾದರೆ ದಲಿತರಿಗೆ ಅಧ್ಯಕ್ಷ ವಾದಿಗಳನ್ನು ವಹಿಸಿಕೊಳ್ಳುವ ಅರ್ಹತೆಯೇ ಇಲ್ಲವೇ..? ಸಮಾನತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಕಾಂಗ್ರೆಸ್ ದೂರಿನ ರಿಗೆ ಇದ್ಯಾವುದು ಗಮನಕ್ಕೆ ಬಂದಿಲ್ಲವೇ...? ಇದೊಂದು ಜಾಣ ನಿದ್ರೆ ಎಂದು ಈಗ ದಲಿತರು ತಿಳಿಯಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿದಾನಂದ, ವಿರುಪಾಕ್ಷ, ಮಂಜುನಾಥ್, ಅರುಣ್ ಕುಮಾರ್, ಕುಶಾಲ್ ಉಪಸ್ಥಿತರಿದ್ದರು.
Повторяем попытку...
Доступные форматы для скачивания:
Скачать видео
-
Информация по загрузке: