#Kurugodu
Автор: kvgpublicnews
Загружено: 2026-03-03
Просмотров: 3114
Описание:
ಕುರುಗೋಡು ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡಬಸವೇಶ್ವರ ಜಾತ್ರ ಮಹಾ ರಥೋತ್ಸವ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು.
ಹೋಳಿ ಹುಣ್ಣಿಮೆಯ ದಿನದಂದು ಮಧ್ಯಾಹ್ನ 3:19ನಿಮಿಷದಿಂದ 6:48 ರವರೆಗೆ ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನವೇ ಜನಸಾಗರದಲ್ಲಿ ರಥೋತ್ಸವ ಅತ್ಯಂತ ಅದ್ದೂರಿಯಿಂದ ಜರುಗಿತು.
ಶ್ರೀ ದೊಡ್ಡಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ದೊಡ್ಡಬಸವೇಶ್ವರ ದೇವಸ್ಥಾನದ ತುಂಬ ಹೂವಿನ ಅಲಂಕಾರ ಮಾಡಿ ಸುಂದರವಾಗಿ ಕಂಗೊಳಿಸುತ್ತಿತ್ತು.
ದೇವಸ್ಥಾನದಲ್ಲಿನ ಹೂವಿನ ಅಲಂಕಾರ ಭಕ್ತ ವೃಂದಕ್ಕೆ ಅತ್ಯಾಕರ್ಷಕವಾಗಿತ್ತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ಶ್ರೀ ದೊಡ್ಡಬಸವೇಶ್ವರ ದೇವರ ಬೃಹತ್ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೊಡ್ಡಬಸವೇಶ್ವರ ಸ್ವಾಮಿಗೆ ಹೂವಿನ ಅಲಂಕಾರ ಸುಂದಾರವಾಗಿ ಮಾಡಿದ್ದರು.
ಪಟ್ಟಣದ, ಜಿಲ್ಲೆಯ, ರಾಜ್ಯ, ಹೊರ ರಾಜ್ಯಗಳಿಂದ ಆಮಿಸಿದ ಭಕ್ತರು ದೇವಸ್ಥಾನದಲ್ಲಿ ಸಾಲು ನಿಂತು ದೇವರ ದರ್ಶನ ಪಡೆದರು.
ರಥೋತ್ಸವದ ಮುಂಚೆ ಅಂದರೆ ಬೆಳಿಗ್ಗೆ 10:30ನಿ.ಕ್ಕೆ ಕೆರೆಕೆರೆ , ಮುಷ್ಟಗಟ್ಟೆ, ಸೋಮಲಾಪುರ ಗ್ರಾಮಗಳ ಕಟ್ಟೆಮನೆ ನಾಯಕ ಜನಾಂಗದವರು ತಮ್ಮ ತಮ್ಮ ಗ್ರಾಮಗಳಿಂದ ದೇವಸ್ಥಾನಕ್ಕೆ ಆಗಮಿಸಿ ಧೂಳುಗಾಯಿ ಹೊಡೆದು..... ಪರಂಪರೆಯಿಂದ ಬಂದಿರುವ ಕುಂಭದ ಮನೆಗೆ ತೆರಳುತ್ತಾರೆ.
ಕೆರೆಕೆರೆ, ಮುಷ್ಟಗಟ್ಟೆ ಗ್ರಾಮದವರು ಸೇರಿ ಒಂದು ಕುಂಭ ಮತ್ತು ಸೋಮಲಾಪುರ ಗ್ರಾಮದವರು ಒಂದು ಕುಂಭ ಸಿದ್ಧತೆ ಮಾಡಿಕೊಂಡು..... ಎರಡು ಪೂರ್ಣ ಕುಂಭ ಹೊತ್ತು ಡೊಳ್ಳು, ಮೇಳ, ಮುತ್ತೈದೆಯರ ಕಳಸಗಳೊಂದಿಗೆ ಮೆರವಣಿಗೆಯ ಮೂಲಕ ಶ್ರೀ ದೊಡ್ಡಬಸವೇಶ್ವರ ರಥದ ಸ್ಥಳಕ್ಕೆ ಆಗಮಿಸಿ ದೇವರಿಗೆ ಕುಂಭ ಸಮರ್ಪಿಸುತ್ತಾರೆ.
ನಂತರ ದೇವಸ್ಥಾನದಿಂದ ಹೂ ಮತ್ತು ತರವಾರಿ ವಸ್ತ್ರಗಳಿಂದ ಅಲಕೃತಗೊಂಡಿರುವ ದೊಡ್ಡಬಸವೇಶ್ವರ ಗೂಳಿಯೊಂದಿಗೆ ನಂದಿ ಕೋಲು ಡೊಳ್ಳು ಸಕಲ ವಾದ್ಯ ಮುತ್ತೈದೆಯರ ಕಳಸದೊಂದಿಗೆ ನೀಲಮ್ಮನ ಮಠಕ್ಕೆ ತೆರಳಿ ನೀಲಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ.... ಮಠದ ಸ್ವಾಮಿಯವರನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಉತ್ಸವ ಮೂರ್ತಿ, ದೊಡ್ಡಬಸವೇಶ್ವರ ಸ್ವಾಮಿ ಮೂರ್ತಿ, ನೀಲಮ್ಮ ದೇವಿಯ ಮೂರ್ತಿ ಹಾಗೂ ಅಲಂಕೃತ ಗೊಂಡಿರುವ ಶ್ರೀ ದೊಡ್ಡಬಸವೇಶ್ವರ ಗೂಳಿಯೊಂದಿಗೆ ರಥದ ಸ್ಥಳಕ್ಕೆ ಆಗಮಿಸಿ ರಥದ ಸುತ್ತ ಐದೂ ಬಾರಿ ಸುತ್ತುತ್ತಾರೆ.
ನಂತರ ನೀಲಮ್ಮ ಮಠದ ಸ್ವಾಮಿಗಳು, ದೊಡ್ಡಬಸವೇಶ್ವರ ಮೂರ್ತಿ, ನೀಲಮ್ಮ ದೇವಿಯ ಮೂರ್ತಿಗಳನ್ನು ರಥದ ಒಳಗಡೆ ಕೂಡಿಸುತ್ತಾರೆ.
ನಂತರ 60 ಅಡಿ ಎತ್ತರದ ರಥವನ್ನು ಭಕ್ತರು ದೇವರ ಜಯಘೋಷ ಕೂಗುತ್ತಾ ಎಳೆಯುತ್ತಾರೆ.....
ದೊಡ್ಡಬಸವೇಶ್ವರ ರಥ ರಥದ ಬೀದಿಯಲ್ಲಿ ಸಾರಗವಾಗಿ ಸಂಚರಿಸಿ ಎದುರು ಬಸವಣ್ಣನ ದೇವಸ್ಥಾನಕ್ಕೆ ತಲುಪಿ ಮತ್ತೇ ಮರುಳಿ ಸ್ವಸ್ಥಾನಕ್ಕೆ ಹಿಂತಿರುಗಿತು.
ಭಕ್ತರು ಸಂಚರಿಸುವ ರಥಕ್ಕೆ ಹೂ ಹಣ್ಣು ಎಸೆದು ಭಕ್ತಿ ಸಮರ್ಪಿಸಿ ದೊಡ್ಡಬಸವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.
ರಥೋತ್ಸವದ ಅಂಗವಾಗಿ ದೇವಸ್ಥಾನದ ಆಡಳಿತ ಮೂರು ದಿನ ಅನ್ನ ದಾಸೋಹ ನಡೆಸಿತು.
ರಥೋತ್ಸವದಲ್ಲಿ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ನೇಮಿಸಿ ಬೆಳಿಗ್ಗೆಯಿಂದ ಶ್ರಮವಹಿಸಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಪುರಸಭೆ ವತಿಯಿಂದ ಭಕ್ತರಿಗೆ ನೀರಿನ ವ್ಯವಸ್ಥೆ ಮತ್ತು ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರು.
ಶ್ರೀ ದೊಡ್ಡಬಸವೇಶ್ವರ ರಥೋತ್ಸವ ಈ ವರ್ಷ ಮಧ್ಯಾಹ್ನ ಜರುಗಿದರು ಲಕ್ಷಾಂತರ ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.
ಜೈ ಶ್ರೀ ದೊಡ್ಡಬಸವೇಶ್ವರ ಸ್ವಾಮಿ.
#kurugodu #ballari #bellary #doddabasaveshwar #veerabhadragouda #news #kannadanews #kvgnews #kvgpublicnews #kvgkurugodu #kvgouda #kudatini #kampli #kurugodunews #kurugoduhistory #history #veerabhadra #historical #place #kveerabhadragouda #kmr #kvg #kannadavarthagani #emmiganuru #muddatanuru #sirigeri #sirigerinews #badanatti #siruguppa #siruguppanews #kannadanewschannel #jatranews #sadhakaranews #kannadavarthagani #doddabasaveshwartemple #kannada #karnataka #india #bangalure #koppala #sindanuru #hampi #vijayanagar #hospete #kamalapur #uttarakannada #uttarakarnataka
Повторяем попытку...
Доступные форматы для скачивания:
Скачать видео
-
Информация по загрузке: