ಉಪನಯನದಲ್ಲಿ ವಟುವನ್ನು ಸಭೆಗೆ ಕರೆದ ಹಾಡು. (ಕರೆತಾರೆ ಸಖಿ ರಂಗನಾ)
Автор: Havyaka_Vishesha Haadugalu
Загружено: 2025-09-06
Просмотров: 796
Описание:
ಹಾಡಿದವರು _ಶಿಲ್ಪಾ ಪ್ರಶಾಂತ್ ಹೆಗಡೆ ಅಂಬ್ಲಿಹೊಂಡ
ಈ ಹಾಡನ್ನು ಗೋದಾವರಿ ಪರಮೇಶ್ವರ ಭಟ್ ಬಿಸಲಕೊಪ್ಪ (ಅಜ್ಜಿಬಳ) ಅವರ ಸಂಗ್ರಹ ಪುಸ್ತಕವಾದ "ಕಾರ್ಯ ಸುಧಾ" ಎಂಬ ಪುಸ್ತಕದಿಂದ ಆಯ್ದುಕೊಂಡಿದ್ದೇವೆ.
ಹಾಡಿನ ಸಾಹಿತ್ಯ
ಕರೆತಾರೆ ಸಖಿ ರಂಗನಾ ಸಭೆಗೀಗ ಮೋಹನಾಂಗನಾ || ಕರೆತಾರೆ ಬೇಗದಿ ಶ್ರೀ ರಂಗನಾ | ಕಿರುನಗೆ ಮೊಗದಿಂದ ಶೋಭಿಪನಾ | ಧರೆಯೊಳು ದಶ ಅವತಾರದಿ ನಲಿಯುತ ಶರಣರ ಪಾಲಿಪನಾ ||ಪ||
ಮತ್ಸ್ಯಾವತಾರದಿ ಮೆರೆದಾತನಾ ಮತ್ತೆ ವೇದಗಳನ್ನು ತಂದವನಾ|| ದುರುಳರ ತರಿಯಲು ಭಕ್ತವತ್ಸಲನೆಂದು ತಾ ಅವತರಿಸಿಹನಾ ||೧||
ಮಂದರಗಿರಿಯನ್ನು ಪೊತ್ತವನಾ ಸುರರಿಗೆ ಅಮೃತವನಿತ್ತವನಾ || ಘೋರ ರೂಪವ ತಾಳಿ ದುರುಳರ ಕೊಂದಿಹ ಶಿಷ್ಟರ ಪಾಲಕನಾ ||೨||
ಭಕ್ತ ಪ್ರಹ್ಲಾದನ ಕಾಯ್ದವನಾ ದುಷ್ಟ ಕಶಿಪುವ ಕೊಂದವನ || ಬಲಿಯೋಳು ಮೂರಡಿ ಇಳೆಯನು ಬೇಡಿದ ವಾಮನ ಮೂರುತಿಯಾ ||೩||
ಕರದೊಳು ಕೊಡಲಿಯ ಪಿಡಿದವನಾ ದುರುಳ ಕ್ಷತ್ರಿಯರನ್ನು ಕೊಂದವನ || ವರ ಸೂರ್ಯ ತೇಜದಿ ಮೆರೆವ ಪರಾಕ್ರಮಿ ಧೀರ ಪರಶುರಾಮನ ||೩||
ಕೌಸಲ್ಯೆ ಉದರದಿ ಜನಿಸಿಹನಾ ದಶಶಿರ ದೈತ್ಯನ ಕೊಂದವನ || ಕಂಸನ ಮರ್ಧಿಸಿ ಕೃಷ್ಣಾವತಾರದಿ ಕಾಮಿತ ಫಲವೀವನ ||೪||
ಬೌಧ್ಯ ಕಲ್ಕಯನಾಗಿ ಬಂದವನ ಶುದ್ಧ ಭಾವಿಕರನ್ನು ಪೊರೆವವನ || ಸಿದ್ಧ ಮಹಾಂತರ ಮನದಿ ವಿರಾಜಿಪ ಮುದ್ದಾದ ಬಾಲಕನ ||೫||
Повторяем попытку...
Доступные форматы для скачивания:
Скачать видео
-
Информация по загрузке: