ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ; 62 ವಾರಗಳ ಕಠಿಣ ತರಬೇತಿ ಯಶಸ್ವಿಯಾಗಿ ಪೂರ್ಣ
Автор: DD Chandana News
Загружено: 2026-03-07
Просмотров: 81
Описание:
ಬೆಂಗಳೂರು ನಗರದ ಜಾಲಹಳ್ಳಿಯಲ್ಲಿರುವ ವಾಯುಪಡೆ ತಾಂತ್ರಿಕ ಕಾಲೇಜಿನಲ್ಲಿ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಿತು.
ಇಂಜಿನಿಯರಿಂಗ್ ಕೋರ್ಸ್ನ ತರಬೇತಿ ಪೂರ್ಣಗೊಳಿಸಿದ ಅಧಿಕಾರಿಗಳು ಆಕರ್ಷಕ ಫಥಸಂಚಲನ ನಡೆಸಿದರು.
62 ವಾರಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 108 ಇಂಜಿನಿಯರಿಂಗ್ ಅಧಿಕಾರಿಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡರು.
ಪಥಸಂಚಲನದಲ್ಲಿ ಏರ್ ಮಾರ್ಷಲ್ ಸಂಜೀವ್ ಘುರಾಟಿಯಾ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರೇಡ್ನ ಗೌರವ ವಂದನೆಯನ್ನು ಸ್ವೀಕರಿಸಿದರು.
ತಂಡದಲ್ಲಿ ಭಾರತೀಯ ಅಧಿಕಾರಿಗಳಲ್ಲದೆ, ಸ್ನೇಹಪರ ವಿದೇಶಿ ರಾಷ್ಟ್ರಗಳ 9 ಅಧಿಕಾರಿಗಳು ಕೂಡ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. W
ಪರೇಡ್ ಬಳಿಕ 'ಏರ್ ಡೆವಿಲ್ಸ್' ತಂಡದಿಂದ ರೋಚಕ ಸ್ಕೈ ಡೈವಿಂಗ್ ಪ್ರದರ್ಶನ ಹಾಗೂ 'ಏರ್ ವಾರಿಯರ್ ಡ್ರಿಲ್ ಟೀಮ್'ನ ಅದ್ಭುತ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು.
ತರಬೇತಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಪದಕ ವಿತರಿಸಲಾಯಿತು .
ತರಬೇತಿಯಲ್ಲಿ ಅಗ್ರಸ್ಥಾನ ಪಡೆದ ಫ್ಲೈಯಿಂಗ್ ಆಫೀಸರ್ ದೇವೇಂದ್ರ ಚುಡ್ ರೈ ಅವರಿಗೆ ಪ್ರತಿಷ್ಠಿತ 'SWORD ಆಫ್ ಹಾನರ್' ನೀಡಲಾಯಿತು.
ವೃತ್ತಿಪರ ಸೇವಾ ತರಬೇತಿಯಲ್ಲಿ ಅತ್ಯುತ್ತಮ ಸಾಧನೆಗಾಗಿ ಫ್ಲೈಯಿಂಗ್ ಆಫೀಸರ್ ಅಮರ್ತ್ಯ ಸಿಂಗ್ ಅವರಿಗೆ 'ಪ್ರೆಸಿಡೆಂಟ್ಸ್ ಪ್ಲೇಕ್' ನೀಡಲಾಯಿತು.
ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಫ್ಲೈಯಿಂಗ್ ಆಫೀಸರ್ ಪ್ರಶಾಂತ್ ಪಾಂಡೆ ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿ ಫ್ಲೈಯಿಂಗ್ ಆಫೀಸರ್ ಇಂಗವಲೆ ಅವರು ಪ್ರಥಮ ಸ್ಥಾನ ಪಡೆದು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಈ ವೇಳೆ ಏರ್ ಮಾರ್ಷಲ್ ಸಂಜೀವ್ ಘುರಾಟಿಯಾ, ಭಾರತೀಯ ವಾಯುಪಡೆಯ ಇಂಜಿನಿಯರಿಂಗ್ ಅಧಿಕಾರಿಗಳು ಶಾಂತಿಕಾಲದಲ್ಲಿ ಮತ್ತು ಯುದ್ಧದಂತಹ ಸಂದರ್ಭಗಳಲ್ಲಿ ವಾಯುಪಡೆಯ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: