ಭಕುತ ಜನಮಾನಸಕೆ ಬಲವನ್ನು ತುಂಬುತಿಹ ಶಕುತ ಗುರುವರ ನಿನ್ನ ಚರಣಕೆರಗುವೆವು
Автор: Drishya Bharathi
Загружено: 2026-03-11
Просмотров: 3597
Описание:
ಭಕುತ ಜನಮಾನಸಕೆ ಬಲವನ್ನು ತುಂಬುತಿಹ
ಶಕುತ ಗುರುವರ ನಿನ್ನ ಚರಣಕೆರಗುವೆವು |
ಅಕಳಂಕ ಮಹಿಮನೇ ಗುರು ರಾಘವೇಶ್ವರನೆ
ಬಕುಲ ವೃಕ್ಷದ ತೆರದಿ ನೆರಳನೀವವನೆ || ಪ ||
ಕೆಟ್ಟ ಮಕ್ಕಳುಯಿಹರು ಅಲ್ಲಲ್ಲಿ ಧರಣಿಯಲಿ
ದುಷ್ಟ ತಾಯಿಯುಯಿಹಳೆ ಈ ಭೂಮಿಯಲ್ಲಿ |
ತಟ್ಟುತ್ತ ಕದವನ್ನು ಮೊರೆಯಿಡುವೆ ನಿನ್ನಲ್ಲಿ
ಕಟ್ಟಿರುವ ಕಣ್ಣುಗಳ ಪಟ್ಟಿಯನು ಸರಿಸು || ೧ ||
ಮಾತೆಯಂದದಿ ಶಿಷ್ಯರನು ಸಲಹಿ ಪೊರೆಯುತಿಹ
ದಾತಾರ ನಿನ್ನಡಿಗೆ ಶರಣು ಬಂದಿಹೆವು |
ಮಾತಿನೊಳು ಕಾರ್ಯದೊಳು ತಿಳಿಯದೆಲೆ ಎಸಗಿರುವ
ಪಾತಕವ ಮನ್ನಿಸುತ ಮುನ್ನಡೆಸು ಗುರುವೆ || ೨ ||
ಗುರುವವರ ಚರಣಕ್ಕೆ
ರಚನೆ: ಶ್ರೀಮತಿ ಸತ್ಯಲತಾ ಸಿದ್ಧಮೂಲೆ, ಗೋವಿಂದೂರು
ರಾಗ ಸಂಯೋಜನೆ: ವಿದುಷಿ ಶ್ರೀಮತಿ ಶ್ವೇತಾ ಖಂಡಿಗೆ
ಹಾಡಿದವರು: ಶ್ರೀಮತಿಯರಾದ ಶ್ವೇತಾ ಖಂಡಿಗೆ, ಪ್ರಸನ್ನಾ ಭೂತೇರು, ವಾಣಿ ಕೊಟ್ರೋಡಿ
ದಿನಾಂಕ: 05-03-2026
ಸ್ಥಳ: ನಮ್ಮಮನೆ ಹವ್ಯಕಭವನ, ಗುರುವಾಯನಕೆರೆ
ಖ್ಯಾಪನೆ ದಿವಸ
Повторяем попытку...
Доступные форматы для скачивания:
Скачать видео
-
Информация по загрузке: