ಮಾರಣಕಟ್ಟೆ ಶ್ರೀಕ್ಷೇತ್ರ ಮಹಾತ್ಮೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಹೈಗುಳಿಯ ಮಹಾಅಬ್ಬರದ ಪ್ರದರ್ಶನ ಹೇಗಿತ್ತು ಗೊತ್ತಾ?!🔥
Автор: JJS SHRUTHISAGARA Yaksha Sindhoora | ಯಕ್ಷ ಸಿಂಧೂರ
Загружено: 2026-02-17
Просмотров: 483
Описание:
#yakshagana #yaksha #yakshaprashna #yakshagana2022 #yakshaprasnalu #yakshaganahasya #yakshaganabadagutittu #yakshagana2023 #yakshaganartist #yakshaganabayalata #udupidistrict #manglore #shiva #tandav #tulunadu #yakshaganasong #yakshaganavideo #yakshaganadance #yakshaganalove #yakshagana2022 #ಯಕ್ಷಗಾನ #ಯಕ್ಷಗಾನಂ_ಗೆಲ್ಗೆ #ಯಕ್ಷಗಾನಂಗೆಲ್ಗೆskt #ಯಕ್ಷಗಾನ_ಶ್ರೀದೇವಿ_ಮಹಾತ್ಮೆ #perdoormela#mela #pavanjemela #saligramamela #maranakatte #patlasathishshetty #jansale #entertaiment #entertainment, #entertainmentvideo #entertaining #entertainer #entertainingvideos #aata #jansale #patla #nagashree #natya #bharathanatyam #bharatanatyamperformance #bharathanatyam #yakshasindhoora #ಯಕ್ಷಸಿಂಧೂರ #viral #viralvideo #trending #tredningvideo
ಮಾರಣಕಟ್ಟೆ ಶ್ರೀ ಕ್ಷೇತ್ರ ಮಹಾತ್ಮೆಯಲ್ಲಿ ಹೊಸದಾಗಿ ಸೇರ್ಪಡೆ ಮಾಡಿದ ಹೈಗುಳಿಯ ಮಹಾ ಅಬ್ಬರದ ಪ್ರದರ್ಶನ ಹೇಗಿತ್ತು ಗೊತ್ತಾ?! ಇಲ್ಲಿವೆ ನೋಡಿ ಅದರ ಒಂದು ಸಣ್ಣ ಝಲಕ್..!!! 🔥💥🔥
ಸಾಕಷ್ಟು ಬದಲಾದ ಮಾರಣಕಟ್ಟೆ ಶ್ರೀ ಕ್ಷೇತ್ರ ಮಹಾತ್ಮೆಯ ಕಥಾಹಂದರಕ್ಕೆ ಬಂದಾಗ, ಯಕ್ಷರಂಗದ ಹೈ ವೊಲ್ಟೇಜ್ ಕಲಾವಿದರಾದ ನಗರ ಸತೀಶ್ ಶೆಟ್ಟಿಯವರ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಮತ್ತು ನಂದೀಶ್ ಜನ್ನಾಡಿಯವರ ಮಹಿದಾನವಿ ಮತ್ತು ಹಸಲ ಹೈಗುಳಿಯ ಮಹಾ ಅಬ್ಬರದ ಪ್ರವೇಶವಂತೂ, ಮೈ-ಮನ ನವಿರೇಳಿಸುವಂತೆ ಮಾಡುತ್ತದೆ. ಒಂಥರಾ goosebumps...!!! ತುಂಬಾ ಪಾಸಿಟಿವ್ ಎನರ್ಜಿ ಕುಳಿತಲ್ಲಿಯೇ ಕೊಡುತ್ತದೆ.
ಇನ್ನು, ಮಿಕ್ಕುಳಿದಂತೆ ಐರಬೈಲು ಆನಂದ ಶೆಟ್ಟಿಯವರ ಕಂಹಾಸುರ ಮೂಕಾಸುರ ಪಾತ್ರ, ನಾಗೂರು ಶ್ರೀನಿವಾಸ ದೇವಾಡಿಗರ ಚಿತ್ತೂರು ಸಂಸ್ಥಾನದ ಚಂದಯ್ಯ ಶೆಟ್ಟಿ ಪಾತ್ರ, ಆಲೂರು ಸುರೇಂದ್ರ ಶೆಟ್ಟರ ಸ್ವಾಮಿ ಬ್ರಹ್ಮಲಿಂಗೇಶ್ವರ, ದತ್ತಾತ್ರೇಯ ಮರಾಠಿಯವರ ಕೊಲ್ಲಾಂಬಿಕೆ ಪಾತ್ರ ಅತೀವವಾಗಿ ಜನಮಾನಸ ಗೆಲ್ಲುತ್ತದೆ.
ಆದರೆ, ಕೆಲ ಪೂರಕ ಕಥೆಗಳನ್ನು ತೆಗೆದು ಸಂಪೂರ್ಣ ಮಾರಣಕಟ್ಟೆ ಶ್ರೀ ಕ್ಷೇತ್ರ ಮಹಾತ್ಮೆಯನ್ನು ಕಾಲಮಿತಿಗೆ ಒಳಪಡಿಸಿ, ಕೆಲವೊಂದು ವಿಶೇಷ ಸಂಯೋಜನೆಯೊಂದಿಗೆ ಅದ್ದೂರಿಯ ಪ್ರದರ್ಶನ ಮಾಡಿದರೂ ಸಹ, ಪ್ರಸಂಗದ ಆರಂಭದಲ್ಲಿ ಮತ್ತು ಪ್ರಸಂಗದ ಕೊನೆಯಲ್ಲಿ ಮಾತ್ರ ಮಹಾ ಅಬ್ಬರ ಇರುವುದರ ಹೊರತಾಗಿ ಮಧ್ಯದ ಅವಧಿಯಲ್ಲಿ ಬರುವಂತಹ ಎಲ್ಲಾ ಪಾತ್ರಗಳು ತುಸು ಜೀವಂತಿಕೆ ಕಳೆದುಕೊಂಡಂತೆ ಭಾಸವಾಗುತ್ತದೆ.
ಅದರಲ್ಲಿಯೂ, ಹರನ ತಪ ಕೆಡಿಸುವ ಸುಂದರ ರತಿ-ಮನ್ಮಥರು, ಶೋಣಿತಾಪುರದ ಪ್ರಭ ಭಂಡಾಸುರ, ತಾಯಿ ಲಲಿತಾ ಪರಮೇಶ್ವರಿ ಮತ್ತು ದೇವಿ ಬಾಲಾಂಬಿಕೆ, ಕಂಹಾಸುರ ಶಿವನ ತಪಸ್ಸಿಗೆ ಕುಳಿತು ಸಾವೇ ಇಲ್ಲದ ಹಾಗೆ ವರ ಬೇಡಲು ಮುಂದಾದಾಗ ಅವನ ನಾಲಿಗೆ ಮೇಲೆ ನಲಿದಾಡಿ ಮಾತು ಬಾರದ ಹಾಗೆ ಮಾಡಿ ಮೂಕನಂತೆ ಮಾಡುವಂತಹ ಆ ವಾಣಿ ವಾಗ್ಧೇವಿ, ಕೊಲ್ಲಾಂಬಿಕೆಯನ್ನು ರಕ್ಷಿಸಲು ಬ್ರಹ್ಮಲಿಂಗ ಕಳಿಸುವಂತಹ ಸಪರಿವಾರ ಶಕ್ತಿ ದೈವ ಗಣಗಳು ಹಾಗೂ, ಸುಪಾಶ್ವಕ ಮುನಿ, ದಿತಿಸುತೆ ಮಾಲಿನಿ, ವೀರ ವಿದ್ಯುನ್ಮಾಲಿ, ಯಕ್ಷರಾಜ ಪಿಂಗಾಳಕ್ಷ, ದೈತ್ಯ ಕುಲ ತಿಲಕ ಮಹಿಷಾಸುರ, ಮತ್ತವನನ್ನು ಕೊಲ್ಲುವ ಮಹಿಷ ಮರ್ಧಿನಿ ಇನ್ನೂ ಮನಸೂರೆಗೊಂಡಂತಹ ಅತಿರಥ ಮಹಾರಥ ಕಲಾವಿದರ ಸಂಯೋಗದ ಕೆಲವು ಮನಸೆಳೆವಂಥ ಪಾತ್ರಗಳು ಈ ವರ್ಷದ ಕ್ಷೇತ್ರ ಮಹಾತ್ಮೆಯಲ್ಲಿ ಇನ್ನಿಲ್ಲವಾಗಿವೆ ಮತ್ತದು ತುಸು ಮನ ನಿರಸಗೊಳಿಸುತ್ತವೆ. ತುಂಬಾ ಮಿಸ್ ಮಾಡಿಕೊಂಡಂತೆ ಅನ್ನಿಸುತ್ತದೆ.
ಒಟ್ಟಾರೆಯಾಗಿ, ಹೇಳುವುದಾದರೆ ಎಲ್ಲಿಯೋ ಒಂದು ಕಡೆ ಪ್ರಸಂಗ ಮುಗಿದು ಮಂಗಲ ಹಾಡುವ ಅಷ್ಟೊತ್ತಿಗೆ ಅನ್ನಿಸುತ್ತದೆ, ಮೊದಲಿನಿಂದಲೂ ಪ್ರದರ್ಶನಗೊಳ್ಳುತ್ತಾ ಬಂದಿರುವ ಆ ಮೂಲ ಕಥೆಯ ಶೈಲಿಯೇ ತುಂಬಾ ಚೆನ್ನಾಗಿತ್ತು; ಬಲು ಆಕರ್ಷಕವಾಗಿತ್ತಲ್ಲ ಎಂದು ಪದೇ- ಪದೇ ಅನ್ನಿಸೋದು ಮಾತ್ರ ಸುಳ್ಳಲ್ಲ.💯🙏🏻 ಮತ್ತದಕ್ಕೇ, ಒಂಥರಾ ಹಳೆ ಬೇರಿಗೆ ಹೊಸ ಚಿಗುರು ಕೂಡಿ ಸೇರಿರಲು ಗಿಡಮರಬಳ್ಳಿಗಳು ಬೆಳೆದು ನೋಡಲು ಅದೆಷ್ಟು ಬಲು ಸೊಗಸು... ಬಹು ಸೊಬಗು ಎನ್ನುವ ಹಾಗೆಯೇ, ಮೂಲ ಕಥೆಗೆ ಯಾವುದೇ ಧಕ್ಕೆ ಬಾರದ ಹಾಗೆ ಈ ವರ್ಷ ಹೊಸದಾಗಿ ಸೇರ್ಪಡೆ ಮಾಡಿದ ಹಸಲ ಹೈಗುಳಿಯ ಪ್ರವೇಶವನ್ನು ಕೂಡಾ ಮೂಲಕಥೆಗೆಯೇ ಪ್ರತ್ಯೇಕ ಸೇರಿಸಿ ಮಾಡಿಸಿದ್ದಿದ್ದರೆ, ಕ್ಷೇತ್ರ ಮಹಾತ್ಮೆ ಇನ್ನೂ ಸೂಪರ್ ಆಗಿ ಮೂಡಿ ಬರುತ್ತಿತ್ತು ಅನ್ನೋದು ನನ್ನ ವೈಯ್ಯಕ್ತಿಕ ಅಭಿಪ್ರಾಯ.💯🙏🏻
ಕ್ಷೇತ್ರ ಮಹಾತ್ಮೆ ಅಂತ ಹೇಳಿದ್ರೆ, ವರ್ಷ ವರ್ಷಕ್ಕೆ ಹೇಗೂ ಸಹ ಬೇಕಾದರೂ ಬದಲಾವಣೆ ಮಾಡಬಹುದಾ...?! ಹಾಗಿದ್ರೆ ಇಷ್ಟು ವರ್ಷದ ಕಥೆ... ಎಲ್ಲಾ ಪೂರ್ತಿ ಕಟ್ಟುಕಥೆಯೇ...??? ಅಥವಾ ಈಗ ಆಡುವುದು ಕಟ್ಟು ಕಥೆಯೇ..?! ಎಂಥಹ ವಿಪರ್ಯಾಸ...!!! ಕ್ಷೇತ್ರ ಮಹಾತ್ಮೆ ಯಲ್ಲಿ ಅನಗತ್ಯ ಕಥೆ ಬದಲಾವಣೆ ಸಾಧ್ಯವೇ?! ಒಮ್ಮೆ ಸಾಧ್ಯ ಅಂತಾದರೆ ಇತಿಹಾಸ ಸುಳ್ಳೇ?! ದಯವಿಟ್ಟು ತಿಳಿದವರು ವಿವರಿಸಿ ಎಂದು ಅಂದು ಯಕ್ಷ ಟಿವಿ ಕನ್ನಡದ ಪೇಜ್ ನಲ್ಲಿ ಸಾಕಷ್ಟು ಜನ ಯಕ್ಷಕಲಾಭಿಮಾನಿಗಳು ಪ್ರಶ್ನಿಸಿ ಕೇಳಿದ್ದರು. ಅದೇ ಗೊಂದಲದ ಪ್ರಶ್ನೆ ಎಲ್ಲರ ಹಾಗೆ ಈಗ ನನ್ನ ಮನಸ್ಸಿನಲ್ಲಿಯೂ ಸಹ ಓಡುತ್ತಿದೆ. ನಿಜ! ಬದಲಾವಣೆ ಎನ್ನುವಂತದ್ದು ಸಹಜ ನಿಯಮ. ಅದು ಅಗತ್ಯ ಕೂಡಾ...!!! ಆದರೂ, ಇಂತಹ ಬದಲಾವಣೆಯೇ....?! ನಿಜಕ್ಕೂ, ನೀವೇ ಉತ್ತರಿಸಬೇಕು. ☺️🙏🏻
Повторяем попытку...
Доступные форматы для скачивания:
Скачать видео
-
Информация по загрузке: