1st PUC Kannada/ Akhanda Karnataka ಅಖಂಡ ಕರ್ನಾಟಕ 1-1 ಪ್ರಥಮ ಪಿಯುಸಿ
Автор: DEVARAJU E (PUC KANNADA CLASS)
Загружено: 2020-11-10
Просмотров: 8473
Описание:
#DEVARAJUE #1stpuckannada #2ndpuckannada #AnnualPaperQuastionandAnswer #2nd_puc_kannada_Annual_Exam_question_paper_Solved #akhanada_karnataka #ಪ್ರಥಮ_ಪಿಯುಸಿ_ಕನ್ನಡ_ಪದ್ಯಗಳು #1st_PUC_Kannada_poem
#ಅಖಂಡಕರ್ನಾಟಕ
ಕುವೆಂಪು ಅವರು ರಚಿಸಿರುವ "ಕನ್ನಡ ಡಿಂಡಿಮ" ಎಂಬ ಕೃತಿಯಿಂದ ಅಖಂಡ ಕರ್ನಾಟಕ ಎಂಬ ಕವಿತೆಯನ್ನು ಆರಿಸಿಕೊಳ್ಳಲಾಗಿದೆ. ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯವರು. ತೀರ್ಥಹಳ್ಳಿ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದ ಕುವೆಂಪು ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿಯು ಕರ್ತವ್ಯ ನಿರ್ವಹಿಸಿದ್ದಾರೆ.
ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಕುವೆಂಪು ಅವರು ಭಾವಗೀತೆ, ಕತೆ, ಕಾದಂಬರಿ, ನಾಟಕ, ಮಹಾಕಾವ್ಯ ವಿಮರ್ಶೆ, ಮಕ್ಕಳ ಸಾಹಿತ್ಯ, ವೈಚಾರಿಕ ಲೇಖನ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಸಾಹಿತ್ಯ ಸೃಷ್ಟಿಸಿದ್ದಾರೆ. ಕೊಳಲು, ಕನ್ನಡ ಡಿಂಡಿಮ, ಪ್ರೇಮ ಕಾಶ್ಮೀರ, ಕೋಗಿಲೆ ಮತ್ತು ಸೋವಿಯತ್ ರಷ್ಯಾ, ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳನ್ನು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳನ್ನು, ನೆನಪಿನ ದೋಣಿಯಲ್ಲಿ ಆತ್ಮಕಥನ, ನಿರಂಕುಶಮತಿಗಳಾಗಿ, ಮನುಜಮತ ವಿಶ್ವಪಥ, ವಿಚಾರ ಕ್ರಾಂತಿಗೆ ಆಹ್ವಾನ ಎಂಬ ವೈಚಾರಿಕ ಕೃತಿಗಳನ್ನು, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ, ಬೆರಳ್ಗೆ ಕೊರಳ್ ಇನ್ನು ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಧಾರವಾಡದಲ್ಲಿ ನಡೆದ 39ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ, ರಾಜ್ಯ ಸರ್ಕಾರ ರಾಷ್ಟ್ರಕವಿ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಷ್ಟ್ರದ ಬದುಕಿನಲ್ಲಿ ರಾಜಕೀಯ ಅಧಿಕಾರವೇ ಅಂತಿಮವಲ್ಲ. ಪ್ರಭುತ್ವವು ನಾಡಿನ ಸಾಂಸ್ಕೃತಿಕ ಅಸ್ತಿತ್ವವನ್ನು ನಿರ್ಲಕ್ಷಿಸುತ್ತದೆ. ರಾಜಕೀಯ ಪ್ರಭುತ್ವವು ನೈತಿಕ ಅಧಃಪತನತ್ತ ಸಾಗಿದಾಗ ಸಾಂಸ್ಕೃತಿಕ ಶಕ್ತಿಗಳೇ ನಾಡಿನ ಅಂತಃಪ್ರಜ್ಞೆಯ ದ್ಯೋತಕವಾಗಿ ಪ್ರತಿರೋಧಿಸುತ್ತಾ ಬಂದಿವೆ. ರಾಜ್ಯದ ಆತ್ಮ ಗೌರವವನ್ನು ಎತ್ತಿ ಹಿಡಿದಿವೆ. ಆಳುವವರ ಇಬ್ಬಂದಿತನದಿಂದಾಗಿ ಕರ್ನಾಟಕದ ಏಕತೆಗೆ ಧಕ್ಕೆ ಒದಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಈ ಕವಿತೆ ಅತ್ಯಂತ ಪ್ರಸ್ತುತವಾಗಿದೆ.
Повторяем попытку...
Доступные форматы для скачивания:
Скачать видео
-
Информация по загрузке: