ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story

Автор: Public TV

Загружено: 2019-11-28

Просмотров: 1327571

Описание: ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur

ರಾಯಚೂರು: ಕೆಲ ಪ್ರಗತಿಪರ ರೈತರ ಹೊಸ ಪ್ರಯೋಗಗಳು ಯಶಸ್ವಿಯಾಗಿದ್ದು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ. ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರ ಈ ಹೊಸ ಟೆಕ್ನಿಕ್ ಯಶಸ್ವಿಯಾಗಿದ್ದು, ಬದುಕು ಬಂಗಾರವಾಗುತ್ತಿದೆ.

ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲೂ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಲಾಭದಾಯಕ ಕೃಷಿ ಮಾಡಿ ಸುದ್ದಿಯಾಗಿದ್ದಾರೆ.



ನಾರಾಯಣಪುರ ಬಲದಂಡೆ ಕಾಲುವೆ ನೀರನ್ನೇ ನಂಬಿ ಕೃಷಿ ಮಾಡುತ್ತಿರುವ ಸಾವಿರಾರು ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳು ಸೇರಿ ಎಕರೆಗೆ 40 ರಿಂದ 50 ಸಾವಿರ ಖರ್ಚುಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದರು.

ಇದೀಗ ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ. ಖರ್ಚು ಬರುತ್ತಿದೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕ್ರಿಮಿನಾಶಕವಾಗಿ, ಪೋಷಾಕಾಂಶ ನೀಡುವ ಔಷಧಿಯಾಗಿಯೂ ಬಳಕೆ ಮಾಡಬಹುದು ಎಂಬದನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ.

ದೇವದುರ್ಗಾ ತಾಲೂಕಿನ ಗಬ್ಬೂರು ಸೇರಿದಂತೆ ಸುತ್ತಲಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿನ ರೈತರು ಈ ಪ್ರಯೋಗದಿಂದ ಯಶಸ್ವಿಯಾಗಿದ್ದಾರೆ. ಅಡುಗೆ ಎಣ್ಣೆಗಳಾದ ಪಾಮ್, ಶೇಂಗಾ, ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ, ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ, ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಬಹುದು ಎನ್ನುವುದನ್ನು ರೈತರು ಕಂಡುಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ.

ಮಿಶ್ರಣ ಹೇಗೆ?
ಮೆಣಸಿನಕಾಯಿ, ಹತ್ತಿ ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಬೆಳೆ ಬೆಳೆಯುತ್ತಿರುವಾಗ ಪ್ರತಿ ವಾರಕ್ಕೊಮ್ಮೆ ಈ ಔಷಧಿಯನ್ನು ಸಿಂಪಡಣೆ ಮಾಡಬೇಕು, ಇಲ್ಲಿ ಮುಖ್ಯವಾಗಿ ಅಡುಗೆ ಎಣ್ಣೆಯೊಂದಿಗೆ ನೀರು ಮಿಶ್ರಣ ಮಾಡಲು ಒಂದು ಮೀಡಿಯೇಟರ್ ಬೇಕು. ಅದಕ್ಕೆ ಅವರು ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡುತ್ತಾರೆ. ಈ ಮೊದಲು ಎಂಎಸ್ ಫೈರ್ ಎಂಬ ಔಷಧಿಯನ್ನು ಮಿಶ್ರಣಕ್ಕೆ ಬಳಸುತ್ತಿದ್ದರು. ಇದನ್ನು ಸಹ ಪ್ರತಿ 100 ಎಂ ಎಲ್ ಗೆ 40 ರೂಪಾಯಿ ಕೊಟ್ಟು ಖರೀದಿಸಬೇಕಾಗಿತ್ತು.

ಪ್ರತಿ ಎಕರೆಗೆ ಒಂದು ಕೆಜಿ ಅಡುಗೆ ಎಣ್ಣೆ ಹಾಗೂ ಅದಕ್ಕೆ ಆರು ಕೋಳಿ ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 19 ಲೀಟರ್ ನಂತೆ ನೀರನ್ನ ಬೆರೆಸಿ ಆರು ಟ್ಯಾಂಕ್ ಗಳ ಔಷಧಿಯನ್ನು ಸಿಂಪಡಣೆ ಮಾಡಬೇಕು. ನಿಗಿದಿತ ಸಮಯಕ್ಕೆ ಸರಿಯಾಗಿ ಸಿಂಪಡಣೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಪ್ರತಿ ಬಾರಿಯೂ ಔಷಧಿಗಾಗಿ ಅಡುಗೆ ಎಣ್ಣೆ ಪ್ರತಿ ಕೆಜಿಗೆ 60 ರಿಂದ 120 ರೂಪಾಯಿ, ಆರು ಮೊಟ್ಟೆಗಳಿಗೆ 40 ರೂಪಾಯಿ, ಕೂಲಿ 300 ರೂಪಾಯಿ ಹೀಗೆ ಕೇವಲ 450 ರೂಪಾಯಿಯಲ್ಲಿ ಔಷಧಿಯನ್ನು ಸಿಂಪಡಣೆ ಮಾಡಬಹುದು. ಆದೇ ರಸಾಯನಿಕ ಬಳಸಿದರೆ ಪ್ರತಿ ಲೀಟರ್ ಗೆ 1000-1500 ರೂಪಾಯಿ ಹಾಗು ರಸಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ.

ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ರೈತರು ಸಹ ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದಾರೆ.

Watch Live Streaming On http://www.publictv.in/live

Download Public TV app here:
Android: https://play.google.com/store/apps/de...

iOS: https://apps.apple.com/in/app/public-...

Keep Watching Us On Youtube At:    / publictvnewskannada  
Watch More From This Playlist Here:    / publictvnewskannada  



Read detailed news at www.publictv.in

Subscribe on YouTube: https://www.youtube.com/user/publictv...
Follow us on Google+ @ https://plus.google.com/+publictv
Like us @   / publictv  
Follow us on twitter @   / publictvnews  

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

''ಮಾರ್ಕೆಟ್ ನ ಚಿಂತೆ ಬೇಡ ಇದನ್ನು ಬೆಳೆದರೆ   ನಾನೇ ತೆಗೆದುಕೊಳ್ಳುತ್ತೇನೆ''||Babu rao Thota ||

''ಮಾರ್ಕೆಟ್ ನ ಚಿಂತೆ ಬೇಡ ಇದನ್ನು ಬೆಳೆದರೆ ನಾನೇ ತೆಗೆದುಕೊಳ್ಳುತ್ತೇನೆ''||Babu rao Thota ||

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

Live || ಸೋಮವಾರದಂದು  ಕೇಳಬೇಕಾದ ಮಂಜುನಾಥ ಸುಪ್ರಭಾತ|Manjunatha Suprabhatha | ಭಕ್ತಿ ಸುಧೆ

Live || ಸೋಮವಾರದಂದು ಕೇಳಬೇಕಾದ ಮಂಜುನಾಥ ಸುಪ್ರಭಾತ|Manjunatha Suprabhatha | ಭಕ್ತಿ ಸುಧೆ

ಒಂದು ಎಕರೆ ಇದಕ್ಕೆ ಅಂತ ಮೀಸಲಿಟ್ಟಿದ್ದೇನೆ ಯಾರು ಇಷ್ಟು ದೊಡ್ಡದಾಗಿ ಈ ಬೆಳೆಯನ್ನ ಹಾಕಿಲ್ಲ... ಇದರಿಂದ ಮೂರು ರೀತಿಯ..!

ಒಂದು ಎಕರೆ ಇದಕ್ಕೆ ಅಂತ ಮೀಸಲಿಟ್ಟಿದ್ದೇನೆ ಯಾರು ಇಷ್ಟು ದೊಡ್ಡದಾಗಿ ಈ ಬೆಳೆಯನ್ನ ಹಾಕಿಲ್ಲ... ಇದರಿಂದ ಮೂರು ರೀತಿಯ..!

ನಾನು ನನ್ನ ಒಂದು ಎಕರೆಯಲ್ಲಿ ಕೃಷಿ ಎನ್ನುವ ಕಂಪನಿ ಕಟ್ಟಿದ್ದೇನೆ!!Part-2||Amurthbhoomi

ನಾನು ನನ್ನ ಒಂದು ಎಕರೆಯಲ್ಲಿ ಕೃಷಿ ಎನ್ನುವ ಕಂಪನಿ ಕಟ್ಟಿದ್ದೇನೆ!!Part-2||Amurthbhoomi

ಈ ಟೆಕ್ನಿಕ್ ಮಾಡಿದ್ರೆ | Banana farming in Karnataka | modern agriculture methods Kannada yelakki bale

ಈ ಟೆಕ್ನಿಕ್ ಮಾಡಿದ್ರೆ | Banana farming in Karnataka | modern agriculture methods Kannada yelakki bale

ಹಳ್ಳಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ.. 1 ಎಕರೆ ಜಮೀನಿದ್ರೆ ಇದು ಸಾಧ್ಯ..! | Organic Mandya | Karnataka Tv

ಹಳ್ಳಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ.. 1 ಎಕರೆ ಜಮೀನಿದ್ರೆ ಇದು ಸಾಧ್ಯ..! | Organic Mandya | Karnataka Tv

ಕೀಟನಾಶಕ ಪೋಷಕಾಂಶಗಳ Growth promoter ತಯಾರಕೆ ಹೇಗೆ..? ಶ್ರೀ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು

ಕೀಟನಾಶಕ ಪೋಷಕಾಂಶಗಳ Growth promoter ತಯಾರಕೆ ಹೇಗೆ..? ಶ್ರೀ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು

ಸೋಮವಾರ ಶಿವ ಭಕ್ತಿಗೀತೆಗಳು | ಲಿಂಗಾಷ್ಟಕಂ | ಬಿಲ್ವಾಷ್ಟಕಂ | Shiva Bhakthi Haadugalu Kannada | Lingashtakam

ಸೋಮವಾರ ಶಿವ ಭಕ್ತಿಗೀತೆಗಳು | ಲಿಂಗಾಷ್ಟಕಂ | ಬಿಲ್ವಾಷ್ಟಕಂ | Shiva Bhakthi Haadugalu Kannada | Lingashtakam

ನಿಮ್ಮ ಜಮೀನಿನ ಮಣ್ಣನ್ನು ಸ್ಥಳದಲ್ಲೇ ಸುಲಭವಾಗಿ ಪರೀಕ್ಷಿಸಿ | Simple techniques to test your soil on spot

ನಿಮ್ಮ ಜಮೀನಿನ ಮಣ್ಣನ್ನು ಸ್ಥಳದಲ್ಲೇ ಸುಲಭವಾಗಿ ಪರೀಕ್ಷಿಸಿ | Simple techniques to test your soil on spot

ಅಣ್ಣ ತಂಗಿ ಅಕ್ರಮ ಸಂಬಂಧ-ತಂಗಿಯ ಸಾವಿನಲ್ಲಿ ಅಂತ್ಯ ! | ಚಿಕ್ಕಬಳ್ಳಾಪುರ @MMTV-News 07-01-2026

ಅಣ್ಣ ತಂಗಿ ಅಕ್ರಮ ಸಂಬಂಧ-ತಂಗಿಯ ಸಾವಿನಲ್ಲಿ ಅಂತ್ಯ ! | ಚಿಕ್ಕಬಳ್ಳಾಪುರ @MMTV-News 07-01-2026

Godrej Rashinban insecticide uses in kannda || ಒಂದೇ ಹೊಡೆತದ ಪರಿಹಾರ ||  ಹೂ ಬಿಡುವ ಸಮಯ ರಶಿನ್ಬಾನ್ ಸಮಯ

Godrej Rashinban insecticide uses in kannda || ಒಂದೇ ಹೊಡೆತದ ಪರಿಹಾರ || ಹೂ ಬಿಡುವ ಸಮಯ ರಶಿನ್ಬಾನ್ ಸಮಯ

ಒಂದು ಎಕರೆಯ ಚಂದದ ತೋಟ...! ಆ ತೋಟದಲ್ಲಿ ಖರ್ಚಿಲ್ಲದೆ ಬಹು ಬೆಳೆಗಳಿಂದ ಆದಾಯ

ಒಂದು ಎಕರೆಯ ಚಂದದ ತೋಟ...! ಆ ತೋಟದಲ್ಲಿ ಖರ್ಚಿಲ್ಲದೆ ಬಹು ಬೆಳೆಗಳಿಂದ ಆದಾಯ

ನಿಂಬೆಹಣ್ಣಿಂದ ವರ್ಷಕ್ಕ 1 ಕೋಟಿ ಲಾಭ | lemon farming | Nandi Tv Karnataka | EPS 3rd

ನಿಂಬೆಹಣ್ಣಿಂದ ವರ್ಷಕ್ಕ 1 ಕೋಟಿ ಲಾಭ | lemon farming | Nandi Tv Karnataka | EPS 3rd

ತೊಗರಿ ಬೇಸಾಯದಲ್ಲಿ ಎಕರೆಗೆ 10 ಕ್ವಿಂಟಾಲ್ ಪಡೆಯುವುದು ಹೇಗೆ ಎಂಬುದಕ್ಕೆ ಅತ್ಯುತ್ತಮ ವಿಡಿಯೋ #redgram #farmers

ತೊಗರಿ ಬೇಸಾಯದಲ್ಲಿ ಎಕರೆಗೆ 10 ಕ್ವಿಂಟಾಲ್ ಪಡೆಯುವುದು ಹೇಗೆ ಎಂಬುದಕ್ಕೆ ಅತ್ಯುತ್ತಮ ವಿಡಿಯೋ #redgram #farmers

ರಸ ಹೀರುವ ಕೀಟಗಳಿಗೆ ಸಾವಯವ ಕೀಟನಾಶಕ | organic liquid fertilizer | organic pesticides | organic farming

ರಸ ಹೀರುವ ಕೀಟಗಳಿಗೆ ಸಾವಯವ ಕೀಟನಾಶಕ | organic liquid fertilizer | organic pesticides | organic farming

Yogi Of Karnataka | ಕರ್ನಾಟಕಕ್ಕೆ ಸಿಕ್ಕೇ ಬಿಟ್ರು ಮತ್ತೊಬ್ಬ ಯೋಗಿ...! PART-02 | Speednewskannada

Yogi Of Karnataka | ಕರ್ನಾಟಕಕ್ಕೆ ಸಿಕ್ಕೇ ಬಿಟ್ರು ಮತ್ತೊಬ್ಬ ಯೋಗಿ...! PART-02 | Speednewskannada

ಅರ್ಕ ಗಗನ್ ಮೆಣಸಿನಕಾಯಿ ತಳಿಯ ಪ್ರಾತ್ಯಕ್ಷಿಕೆ - ಡಾ. ಕೀರ್ತಿಶಂಕರ ಕೆ. & ಶ್ರೀ ಧನಂಜಯ ಎಚ್. ಸಿ|Arka Gagan| Chilli

ಅರ್ಕ ಗಗನ್ ಮೆಣಸಿನಕಾಯಿ ತಳಿಯ ಪ್ರಾತ್ಯಕ್ಷಿಕೆ - ಡಾ. ಕೀರ್ತಿಶಂಕರ ಕೆ. & ಶ್ರೀ ಧನಂಜಯ ಎಚ್. ಸಿ|Arka Gagan| Chilli

ಎಮ್ಮೆ ಸಗಣಿಯಿಂದ ಜೀವಾನುಗಳ ಜೀವಾಮೃತ  || jeevamrutha ✅

ಎಮ್ಮೆ ಸಗಣಿಯಿಂದ ಜೀವಾನುಗಳ ಜೀವಾಮೃತ || jeevamrutha ✅

PVC ಪೈಪ್ ನಲ್ಲಿ ಕಾಳುಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ. Pepper farming in PVC pipe.

PVC ಪೈಪ್ ನಲ್ಲಿ ಕಾಳುಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ. Pepper farming in PVC pipe.

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]