ತರಳೆ ರನ್ನೆ ಕಪ್ಪು ಮೈಯ್ಯವ, ಪಾರ್ವತಿ ರುಕ್ಮಿಣಿ ಸಂವಾದ, Parvati Rukmini Samvada 🙏
Автор: GeethaArniSundaramurthy
Загружено: 2026-02-24
Просмотров: 150
Описание:
#ಕನ್ನಡಭಕ್ತಿಗೀತೆ #daasarapada
#ತರಳೆರನ್ನೆಕಪ್ಪುಮೈಯ್ಯ
/ @geethaarnisundaramurthy7984
Tarale Ranne Kappu Maiyyava
Sri Purandara Daasara Kriti 🙏 Singer : Geetha Arni
ತರಳೆ ರನ್ನೆ ಕಪ್ಪು ಮೈಯ್ಯವ ಯಾತರ
ಚೆಲುವನೆ
ಶ್ರೀ ಪುರಂದರ ದಾಸರ ಕೃತಿ 🙏 ಗಾಯನ ಗೀತ ಆರಣಿ
ಪಾರ್ವತಿ ದೇವಿ ಮತ್ತು ರುಕ್ಮಿಣೀ ದೇವಿಯರ ಮಧ್ಯೆ ನಡೆಯುವ ಈ ಮನಮುಟ್ಟುವ ಸಂಭಾಷಣೆಯ ಭಕ್ತಿಗೀತೆ ಶಿವ ಮತ್ತು ಕೃಷ್ಣನ ಮಹಿಮೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತದೆ.
ಮಂಗಳವಾರದ ಭಕ್ತಿ ಸಂಜೆಗಾಗಿ ಈ ಹಾಡು ನಿಮಗೆ ಶಾಂತಿ ಮತ್ತು ಆನಂದ ನೀಡಲಿ 🙏
ಇಷ್ಟವಾದರೆ Like, Share ಮಾಡಿ ಮತ್ತು Subscribe ಮಾಡಿ.
ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ?
ಕರಿಯ ಜಟೆಯ ಜೋಗಿಗಿಂತ ಉತ್ತಮನಲ್ಲವೇನೆ ?
ಜಲಧಿಯೊಳು ವಾಸವೇನೆ ಮನೆಗಳು ಇಲ್ಲವೆ ?
ಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೇ ?
ಮಂದರ ಗಿರಿಯ ಪೊತ್ತಿಹುದು ಏನು ಚಂದವೇ ?
ಕಂದನ ಒಯ್ದು ಅಡವಿಯಲ್ಲಿಡುವುದು ಯಾವ ನ್ಯಾಯವೇ ?
ಮಣ್ಣನು ಅಗೆದು ಬೇರನು ಮೆಲುವುದು ಏನು ಸ್ವಾದವೇ ?
ತನ್ನ ಕೈಯಲ್ಲಿ ಕಪಾಲ ಪಿಡಿವುದು ಯಾವ ನ್ಯಾಯವೇ ?
ಮುತ್ತಿನ ಹಾರ ಇರಲು ಕರುಳ ಮಾಲೆಯ ಧರಿಸುವರೇ ?
ನಿತ್ಯ ರುಂಡ ಮಾಲೆಯ ಧರಿಸೋದು ಯಾವ ನ್ಯಾಯವೇ ?
ಗಿಡ್ಡನಾಗಿ ಬೆಳೆದು ಅಳೆವುದು ಏನು ನ್ಯಾಯವೇ ?
ಗುಡ್ಡದ ಮಗಳ ತಂದೆಗೆ ಮುನಿಯೋದು ಯಾವ ನ್ಯಾಯವೇ ?
ಪಿತನ ಮಾತ ಕೇಳಿ ಮಾತೆಯ ಶಿರವನಳಿವರೇ ?
ಕ್ಷಿತಿಕಂಠನಾಗಿ ಇರುವೋದು ಯಾವ ನ್ಯಾಯವೇ ?
ಕೋಡಗ ಕರಡಿ ಕಪಿಗಳ ಹಿಂಡು ಬಂಧು ಬಳಗವೇ ?
ಕೂಡಿ ಬಂದ ಭೂತ ಬಳಗ ಜ್ಞಾತಿ ಸಂಬಂಧವೇ ?
ಹಾವಿನ ಹೆಡೆಯ ತುಳಿವರೇನೇ ಅಂಜಿಕಿಲ್ಲವೇ ?
ಹಾವೇ ಮಯ್ಯಿಗೆ ಸುತ್ತಿ ಇರಲು ಹ್ಯಾಂಗೆ ಜೀವಿಪನೇ ?
ಬತ್ತಲು ಇರುವನೇನು ಅವಗೆ ನಾಚಿಕಿಲ್ಲವೇ ?
ಸತ್ತ ಗಜದ ಚರ್ಮ ಹೊದೆಯಲು ಹೇಸಿಕಿಲ್ಲವೇ ?
ಉತ್ತಮ ತೇಜಿ ಇರಲು ಧರೆಯೊಳು ಹದ್ದನು ಏರ್ವರೇ ?
ಎತ್ತಿನ ಬೆನ್ನು ಏರಿದವರು ಬುದ್ಧಿವಂತರೇ ?
ಹರಿಹರರಿಗೆ ಸಾಮ್ಯವೇನೆ ಹೇಳೆ ರುಕ್ಮಿಣೀ ?
ಪುರಂದರ ವಿಠಲ ಸರ್ವೋತ್ತಮ ಕೇಳೆ ಭವಾನಿ!
***
#GeethaArni #KannadaBhakti #ParvatiDevi #RukminiDevi #ShivaKrishna
Повторяем попытку...
Доступные форматы для скачивания:
Скачать видео
-
Информация по загрузке: