ಅದ್ಭುತ ಪವಾಡಗಳ ತಾಣ ಹೊಲೇರಹಳ್ಳಿ ಮುನೇಶ್ವರ ಸ್ವಾಮಿ ದೇವಾಲಯ
Автор: Jagath News
Загружено: 2022-09-14
Просмотров: 3794
Описание:
ಸ್ನೇಹಿತರೇ ಅದ್ಭುತ ಪವಾಡ ಹಾಗೂ ಊಹಿಸಲಾಗದ ಸಮಸ್ಯೆಗಳಿಗೆ ಪರಿಹಾರ ಕಾಣುವ
ನೂರಾರು ಜನ ಕಣ್ಣಾರೆ ಕಂಡಂತ ಹಲವು ಚಮತ್ಕಾರಗಳನ್ನು ಹೊಂದಿರುವ ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ಹೊಲೇರಹಳ್ಳಿ ಶ್ರೀ ಮುನೇಶ್ವರಸ್ವಾಮಿ
ದೇವಾಲಯದ ಬಗ್ಗೆ ನಾನು ಇವತ್ತು ನಿಮಗೆ ತಿಳಿಸುತ್ತೇನೆ
ಸುಮಾರು 200 ವರ್ಷಗಳ ಹಿಂದೆ ಇಲ್ಲಿ ಆಲದಮರ , ಅರಳಿಮರ , ಮಾವಿನಮರ ಈ ಮೂರು ಜೊತೆಜೊತೆಯಲ್ಲಿಯೇ ಬೆಳೆಯುತ್ತಿತ್ತು ದನಕರುಗಳು ಬಿಸಿಲ ಬೇಗೆಯನ್ನು ನೀಗಿಸಿಕೊಳ್ಳಲು ಇಲ್ಲಿ ಬರುತ್ತಿದ್ದವು ಆ ಸಂದರ್ಭದಲ್ಲಿ ಪುಟ್ಟದಾಗಿ ಆರಂಭವಾದ ದೇವಾಲಯ ದಿವಂಗತ ಹೊಲೇರಹಳ್ಳಿ ಪೊರ್ಲಪ್ಪನವರು ಪೂಜೆ ಆರಂಭಿಸಿ ಸ್ವಾಮಿಯ ಸೇವೆಯನ್ನು ಭಕ್ತಾಧಿಗಳಿಗೆ ನೀಡುತ್ತಿದ್ದರು . ಹಲವು ಸಮಸ್ಯೆಗಳಿಗೆ ಪರಿಹಾರವೂ ದೊರೆಯುತ್ತಿತ್ತು
ತದನಂತರ ಪೂರ್ಲಪ್ಪ ಮಕ್ಕಳಾದ ದೊಡ್ಡದಾಸಪ್ಪ , ಇವರ ಸಂತತಿಯವರು ಪೂಜೆ ನಡೆಸಿಕೊಂಡು ಬರುತ್ತಿದ್ದು
ಈ ದೇವಾಲಯದ ಪವಾಡಗಳು ಹೇಳಲು ಪ್ರಾರಂಭಿಸಿದರೆ ನಿಜಕ್ಕೂ ಕೊನೆಯಾಗುವುದಿಲ್ಲ
ದೆವ್ವ ,
ಗಾಳಿ ,
ಮಾಟ ,
ಮಂತ್ರ ,
ತಂತ್ರ ,
ಗ್ರಹಗಳು ಪೀಡಿತ ರೋಗಗಳು ಇರುವಂತಹವರು
ದೇವರ ಸೇವೆ ಮಾಡಿಕೊಂಡು ಕೆಲವರು ಇಲ್ಲಿಯೇ ಎರಡು ಮೂರು ತಿಂಗಳ ತನಕ ಇದ್ದು ತಮ್ಮಗಳ ರೋಗಗಳನ್ನು ವಾಸಿಮಾಡಿಕೊಂಡು ಹೋಗುತ್ತಾರೆ .
ಸ್ನೇಹಿತರೆ
ನಿಮ್ಮ ಗೆ ಎಲ್ಲಾ ತಿಳಿದ ಆಗೆ ಪ್ರತಿ ಗ್ರಾಮದಲ್ಲಿ ನಡೆಯುವ ಜಾತ್ರೆ ಕಾರ್ಯಕ್ರಮಗಳಲ್ಲಿ ಮುನೇಶ್ವರ ಸ್ವಾಮಿ ದೇವರ ಮುಂದಾಳತ್ವ ಅತಿ ಪ್ರಾಮುಖ್ಯತೆ ಹೊಂದಿರುತ್ತದೆ
ಈ ದೇವರು ಇದ್ದರೆ ಗ್ರಾಮದ ಜಾತ್ರೆಗೆ ಒಂದು ಹೊಸ ಹುರುಪು ತರುತ್ತದೆ
ತನ್ನ ಅಕ್ಕತಂಗಿರ ಊಟಕ್ಕಾಗಿ ಅಣ್ಣನಾದ ಮುನೇಶ್ವರ ಮುನಿದ್ಯಾವರು ಎನ್ನುವ ಹೆಸರಿನಲ್ಲಿ ಅವರಿಗೆ ಬಲಿ ದಾನ ಮಾಡುವ ಮೂಲಕ ಶಾಂತಗೊಳಿಸಿ ಸಮಾಜದ ಒಳಿತನ್ನು ಕಾಪಾಡುವ ನಿಟ್ಟಿನಲ್ಲಿ ಈಶ್ವರ ಆದರೆ ಮುನೇಶ್ವರ ನಾಗಿ ಕಾಪಾಡುತ್ತಾನೆ ಎಂದು ಹಿರಿಯರು ತಿಳಿಸುತ್ತಾರೆ
ಸುಮಾರು 35-40 ವರ್ಷಗಳ ಹಿಂದೆ ದೇವಾಲಯದ ವಿಗ್ರಹವನ್ನು ಕದ್ದು ಕಳ್ಳರು ಕೊಂಡು ಹೋಗುತ್ತಿದ್ದಾಗ ಒಂದು ಪುಟ್ಟ ಕೆರೆಯಲ್ಲಿ ವಿಗ್ರಹವನ್ನಿಟ್ಟು ಮುಂಜಾನೆಯ ತನಕ ಕಳ್ಳರು ಆ ವಿಗ್ರವನ್ನು ಸುತ್ತುತ್ತಿದ್ದು ಕೆಲವರು ಅಲ್ಲಿಯೇ ಮೃತಪಟ್ಟರು ಬೆಳಗಿನ ಜಾವ ದೇವಾಲಯವನ್ನು ತೆರೆದಾಗ ವಿಗ್ರಹ ಕಾಣದಿರುವುದನ್ನು ಕಂಡು
ಉಸ್ತವ ದೇವರನ್ನು ಎತ್ತಿದಾಗ ಕಳ್ಳರು ಇಟ್ಟ ಸ್ಥಳದಲ್ಲಿಗೆ ಕರೆದುಕೊಂಡು ಹೋಗಿರುವುದಾಗಿ ಹಿರಿಯರು ಹೇಳಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ
ಸ್ನೇಹಿತರೆ ಇದೆಲ್ಲಾ ವಿಚಾರಗಳನ್ನು ಹೊರತುಪಡಿಸಿ ಹಲವು ಬಾರಿ ಶ್ರೀ ಮುನೇಶ್ವರ ಸ್ವಾಮಿ ದೇವರ ಪವಾಡಗಳನ್ನು ಅಲ್ಲಿಗೆ ಬರುವ ಭಕ್ತರು ಒಬ್ಬೊಬ್ಬರಿಗೂ ಒಂದೊಂದು ರೀತಿಯ ಪವಾಡಗಳನ್ನು ಕಣ್ಣಾರೆ ಕಂಡಿರುವುದಾಗಿ ತಿಳಿಸುತ್ತಾರೆ ಈ ದೇವರ ಬಗ್ಗೆ ತಿಳಿಸಲು ಈ ಒಂದು ಸಂಚಿಕೆ ಸರಿಹೋಗುವುದಿಲ್ಲ ಚಿಕ್ಕದಾಗಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡುತ್ತೇನೆ
ಇಲ್ಲಿಗೆ ನಾನಾ ರಾಜ್ಯಗಳಿಂದ ಭಕ್ತರು ಬರುತ್ತಿರುತ್ತಾರೆ .
ಸ್ವಾಮಿ ಸನ್ನಿಧಿಯಲ್ಲಿ
ಭಕ್ತ ವೃಂದ ತಮ್ಮ ಮಕ್ಕಳ ಹುಟ್ಟುಕೂದಲು ನೀಡುವುದು , ಮುನಿದ್ಯಾವರ ,
ದೀಪ ಆರತಿ ,
ಮತ್ತು ತಮ್ಮ ಹರಕೆ ತೀರಿಸುವುದು ಇನ್ನಿತರ ಸೇವೆಗಳನ್ನು ಇಲ್ಲಿ ಮಾಡುತ್ತಾರೆ.
ಪ್ರತಿ ಮಂಗಳವಾರ , ಶುಕ್ರವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತಿರುತ್ತದೆ
ಪ್ರತಿ ತಿಂಗಳ ಅಮಾವಾಸ್ಯೆಯಂದು ಪೂಜಾ ಕಾರ್ಯಕ್ರಮ. ಹಾಗೂ ಭಜನೆಗಳು ಮತ್ತು ಅನ್ನದಾನ ನಿರಂತರವಾಗಿ ನಡೆಯುತ್ತಾ ಬಂದಿದೆ .
ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಶ್ರೀರಾಮನವಮಿ ಹಬ್ಬ ಕಳೆದ 9 ದಿನಗಳಲ್ಲಿ ಜಾತ್ರೆ ನಡೆಯುತ್ತದೆ . ಜಾತ್ರೆಗೆ ಸುತ್ತಮುತ್ತಲಿನ
ವಸುವುಡ್ಡೆ
ವೆಂಕಟಗಿರಿಕೋಟೆ
ತಿಮ್ಮಳ್ಳಿ
ಗೋಡ್ಲು ಮುದ್ದೇನಹಳ್ಳಿ
ದೊಡ್ಡ ಮುದ್ದೇನಹಳ್ಳಿ
ರಂಗನಾಥಪುರ
ನಾರಾಯಣಪುರ
ಚಿಕ್ಕನಹಳ್ಳಿ
ಸಂದೇನಹಳ್ಳಿ
ವೆಂಕಟೇನ್ಹಳ್ಳಿ
ಚಿನ್ನಗೊಂಡನಹಳ್ಳಿ
ದಂಡಿಗೇನಹಳ್ಳಿ
ಹಾರೋಹಳ್ಳಿ
ಬೈರಾಪುರ
ಬೀಜಾವಾರ
ಗ್ರಾಮಗಳ ಜನರು ದೀಪಗಳನ್ನು ಹೊತ್ತು , ಪಾನಕ ಬಂಡಿಗಳ ಜೊತೆಗೆ ಕುರಿ , ಕೋಳಿ , ಮೇಕೆಗಳನ್ನು ನೀಡುವ ಮುಖಾಂತರ. ಜಾತ್ರೆಯಲ್ಲಿ ಕೋಲಾಟ , ಪಂಡರಿ ಭಜನೆ , ಸಂಜೆ ಭಕ್ತ ಮಾರ್ಕಂಡೇಯ ಪೌರಾಣಿಕ ನಾಟಕವಿರುತ್ತದೆ . ಜಾತ್ರೆಗೆ ಬರುವ ಭಕ್ತಾಧಿಗಳು ದೇವರಿಗೆ ವಂದಿಸಿ ಇಲ್ಲಿ ನಡೆಯುವ ವಿಶೇಷ ಕ್ರೀಡೆ 60 ಅಡಿ ಎತ್ತರದ ಕಂಬದ ಮೇಲೆ ಕಬ್ಬಿಣದ ಪಂಜರದಲ್ಲಿ ಕುಳಿತು ಪಂಜರಕ್ಕೆ ಹಗ್ಗಕಟ್ಟಿ ತೆಂಗಿನ ಕಾಯಿ ಹೊಡೆಯುವ ಸೇವೆ ಮಾಡುತ್ತಾರೆ . ಈ ತೆಂಗಿನ ಕಾಯಿ ಹೊಡೆಯುವುದನ್ನು ಹುಟ್ಟು ಹೊಡೆಯುವುದು ಎನ್ನುತ್ತಾರೆ . ದೇವಾಲಯದ ಪೂರ್ವಕ್ಕೆ ಅಕ್ಕಯ್ಯಮ್ಮ ದೇವಾಲಯವಿದ್ದು ಇಲ್ಲಿ ಹೆಣ್ಣುಮಕ್ಕಳು ಅರಿಕೆಗಳನ್ನು ತೀರಿಸುತ್ತಾರೆ .
ದೇವಾಲಯದ ಪಕ್ಕದಲ್ಲಿ ಅಶ್ವತ್ಥ ಕಟ್ಟೆ ಇದೆ ಇಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಗಳು ನಡೆಯುತ್ತವೆ . ದೇವಾಲಯದ ಉತ್ತರಕ್ಕೆ ತ್ರಿಮುಖ ಗಣಪತಿ ದೇವಸ್ಥಾನವಿದೆ.
ಇದನ್ನು ಬಿಜ್ಜವಾರ ಶತಾಯುಷಿ , ನಾಟಿವೈದ್ಯ ಚಿಕ್ಕಬಿಲ್ಲಪ್ಪನವರ ಜ್ಞಾಪಕಾರ್ಥವಾಗಿ ಬಿ.ಹನುಮಯ್ಯ ನಿವೃತ್ತ ಶಿಕ್ಷಣ ಸಂಯೋಜಕರು ಬಿಜ್ಜವಾರ ಸುಬ್ರಮಣ್ಯ , ಹೆಚ್.ರಾಮಕೃಷ್ಣಪ್ಪ ನಿರ್ಮಿಸಿ ಭಕ್ತರ ಸೇವೆಗೆ ನೀಡಿದ್ದಾರೆ.
ದೇವಾಲಯಕ್ಕೆ ಸ್ವಾಗತ ಕೋರುವ ದ್ವಾರಬಾಗಿಲನ್ನು ದಿವಂಗತ ಲಕ್ಷ್ಮಣರೆಡ್ಡಿ ಮುದ್ದೇನಹಳ್ಳಿ ಇವರು ನಿರ್ಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ
ಹೊಲೇರಹಳ್ಳಿ ಮುನೇಶ್ವರ ಸ್ವಾಮಿಯ ದೇವಾಲಯದ ಸಂಪೂರ್ಣ ಜವಾಬ್ದಾರಿ ಮುನೇಶ್ವರ ಸ್ವಾಮಿ ಟ್ರಸ್ಟ್ ನೆರವೇರಿಸುತ್ತಿದೆ
ಹಿರಿಯರು ಹೇಳುವಂತೆ ಮೂಲತಹ ದೇವರು ನಾಂದಿ ಕಡೆಯಿಂದ ಬಂದು ಇಲ್ಲಿ ನೆಲೆಸಿರುವುದಗಿ ತಿಳಿಸುತ್ತಾರೆ ಇದಕ್ಕೆ ಯಾವುದೇ ದಾಖಲೆಗಳಿಲ್ಲ
ಹೆಚ್ಚಿನ ದೇವಾಲಯದ ಸೇವೆಗೆ ಮತ್ತು ಕೈಕಾರಿಯ ಗಳಿಗೆ ಮತ್ತು ಇಲ್ಲಿ ನಡೆಯುವ ಮದುವೆ ಮತ್ತು ಪ್ರತಿ ತಿಂಗಳು ನಡೆಯುವ ಅಮಾಸೆ ಪೂಜೆ ಇನ್ನೂ ಹಲವು ಸೇವೆಗಳಿಗಾಗಿ ಶ್ರೀ ಮುನೇಶ್ವರ ಸ್ವಾಮಿ ಟ್ರಸ್ಟ್ ಅನ್ನು ಸಂಪರ್ಕಿಸಿ
Повторяем попытку...
Доступные форматы для скачивания:
Скачать видео
-
Информация по загрузке: