ಶತಮಾನಗಳ ನಂಬಿಕೆಯ ಸಾಕ್ಷಿಯಾಗಿ ನಿಂತಿರುವ ಕೊಡಚಾದ್ರಿಯ ಅಮ್ಮನವರು–ಕಾಲಭೈರವ ದೇವಸ್ಥಾನ
Автор: POSTMAN NEWS KANNADA
Загружено: 2026-02-14
Просмотров: 374
Описание:
ಶತಮಾನಗಳ ನಂಬಿಕೆಯ ಸಾಕ್ಷಿಯಾಗಿ ನಿಂತಿರುವ ಕೊಡಚಾದ್ರಿಯ ಅಮ್ಮನವರು–ಕಾಲಭೈರವ ದೇವಸ್ಥಾನ
ಪುರಾತನ ಪರಂಪರೆ, ರಹಸ್ಯ ತ್ರಿಶೂಲ ಮತ್ತು ಶಿವರಾತ್ರಿ ಸಂಪ್ರದಾಯಗಳು ಇಂದಿಗೂ ಜೀವಂತ
ಅಮ್ಮನವರು ಮತ್ತು ಕಾಲಭೈರವ ದೇವಸ್ಥಾನ: ಪಶ್ಚಿಮಘಟ್ಟದ ದಟ್ಟ ಅರಣ್ಯಗಳ ನಡುವೆ, ಕೊಡಚಾದ್ರಿ ಪರ್ವತದ ಶಿಖರದಲ್ಲಿ ನೆಲೆಸಿರುವ ಅಮ್ಮನವರು–ಕಾಲಭೈರವ ದೇವಸ್ಥಾನ ಶತಮಾನಗಳ ಪುರಾತನ ಇತಿಹಾಸ ಹಾಗೂ ಆಧ್ಯಾತ್ಮಿಕ ಮಹಿಮೆಯನ್ನು ತನ್ನೊಳಗೆ ಹೊತ್ತುಕೊಂಡಿದೆ. ಈ ದೇವಾಲಯ ಕೇವಲ ಪೂಜಾ ಸ್ಥಳವಲ್ಲ, ಬದಲಾಗಿ ತಲೆತಲೆಮಾರುಗಳಿಂದ ಸಾಗಿಬಂದ ನಂಬಿಕೆ, ಸಂಪ್ರದಾಯ ಮತ್ತು ರಹಸ್ಯಗಳ ಜೀವಂತ ಕೇಂದ್ರವಾಗಿದೆ.
ಸ್ಥಳೀಯರ ನಂಬಿಕೆಯಂತೆ, ಅಮ್ಮನವರು ಸುತ್ತಮುತ್ತಲ ಹತ್ತಾರು ಗ್ರಾಮಗಳನ್ನು ಕಾಪಾಡುವ ಶಕ್ತಿದೇವತೆಯಾಗಿ ಪೂಜಿಸಲ್ಪಡುತ್ತಾರೆ. ಕಾಲಭೈರವ ದೇವರು ಕ್ಷೇತ್ರಪಾಲಕರಾಗಿ ನೆಲೆಸಿದ್ದು, ದುಷ್ಟಶಕ್ತಿಗಳ ನಿವಾರಣೆ ಹಾಗೂ ಭಕ್ತರ ರಕ್ಷಣೆಗೆ ಪ್ರತೀಕವೆಂದು ಭಾವಿಸಲಾಗಿದೆ. ಪುರಾತನ ಕಾಲದಿಂದಲೇ ಈ ದೇವಾಲಯದಲ್ಲಿ ನಡೆಯುವ ಆಚರಣೆಗಳು ಯಾವುದೇ ಲಿಖಿತ ದಾಖಲೆಗಳಿಗಿಂತಲೂ ಬಲವಾದ ಮೌಖಿಕ ಪರಂಪರೆಯ ಮೂಲಕ ಇಂದಿಗೂ ಮುಂದುವರಿದಿವೆ.
ಈ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ, ಇಂದಿಗೂ ಯಾವ ಲೋಹದಿಂದ ನಿರ್ಮಿತವಾಗಿದೆ ಎಂಬುದು ಪತ್ತೆಯಾಗದ ರಹಸ್ಯಮಯ ತ್ರಿಶೂಲ. ತಜ್ಞರು ಹಾಗೂ ವಿಜ್ಞಾನಿಗಳಿಗೆ ಸವಾಲಾಗಿರುವ ಈ ತ್ರಿಶೂಲವನ್ನು ದೇವಾಲಯದ ದೈವಿಕ ಶಕ್ತಿಯ ಸಂಕೇತವಾಗಿ ಭಕ್ತರು ಭಾವಿಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ವಿಧಿ ವಿಧಾನಗಳಂತೆ ನಡೆಯುವ ತ್ರಿಶೂಲ ಪೂಜೆ ಕ್ಷೇತ್ರದ ಪುರಾತನತೆಯನ್ನು ಮತ್ತಷ್ಟು ಉನ್ನತಗೊಳಿಸುತ್ತದೆ.
ಶಿವರಾತ್ರಿ ಸಂದರ್ಭದಲ್ಲಿ ಇಲ್ಲಿ ನಡೆಯುವ ನಾತಪಂಥ ಸಂಪ್ರದಾಯ, ದೀಪ ಪ್ರಜ್ವಲನ ಹಾಗೂ “ದೀಪಂ ಪಾಪನಾಶಂ” ಎಂಬ ನಂಬಿಕೆಯ ಆಚರಣೆಗಳು ಶತಮಾನಗಳ ಹಿಂದಿನ ಧಾರ್ಮಿಕ ಜೀವನಶೈಲಿಯನ್ನು ನೆನಪಿಸುತ್ತವೆ. ಬೆಳಿಗ್ಗೆ ಪಂಚಾಮೃತ ಅಭಿಷೇಕದಿಂದ ಆರಂಭವಾಗಿ, ದುನಿ ಪೂಜೆ ಹಾಗೂ ದೀಪ ಪ್ರಜ್ವಲನದೊಂದಿಗೆ ಮುಕ್ತಾಯಗೊಳ್ಳುವ ಈ ಆಚರಣೆಗಳು ದೇವಾಲಯದ ಪುರಾತನ ಹಿನ್ನಲೆಗೆ ಜೀವ ತುಂಬುತ್ತವೆ.
ಇಂದು ಕೂಡ, ಆಧುನಿಕತೆಯ ಮಧ್ಯೆಯೇ ತನ್ನ ಮೂಲ ಸ್ವರೂಪವನ್ನು ಕಾಪಾಡಿಕೊಂಡಿರುವ ಅಮ್ಮನವರು–ಕಾಲಭೈರವ ದೇವಸ್ಥಾನ, ಕೊಡಚಾದ್ರಿಯ ಪರ್ವತದಂತೆ ಅಚಲವಾಗಿ ನಿಂತು ಭಕ್ತರ ನಂಬಿಕೆ ಮತ್ತು ಭಕ್ತಿಗೆ ದಾರಿದೀಪವಾಗಿಯೇ ಉಳಿದಿದೆ.
ಐತಿಹಾಸಿಕ ಕೊಡಚಾದ್ರಿ ಪರ್ವತದಲ್ಲಿರುವ ಅಮ್ಮನವರು ಮತ್ತು ಕಾಲಭೈರವ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಸಿದ್ಧತೆಗಳು ಪೂರ್ಣಗೊಂಡಿವೆ. ನಾಳೆ ಶಿವರಾತ್ರಿ ಪ್ರಯುಕ್ತ ಪರಂಪರೆಯಂತೆ ವಿಶೇಷ ಪೂಜೆ, ದೀಪ ಪ್ರಜ್ವಲನ ಹಾಗೂ ಅಪರೂಪದ ನಾತಪಂಥ ಸಂಪ್ರದಾಯದ ಆಚರಣೆಗಳು ವಿಜೃಂಭಣೆಯಿಂದ ನಡೆಯಲಿವೆ.
ಬೆಳಿಗ್ಗೆ ಅಮ್ಮನವರು ಹಾಗೂ ಕಾಲಭೈರವ ದೇವರಿಗೆ ಪಂಚಾಮೃತ ಅಭಿಷೇಕದಿಂದ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ದುನಿ ಪೂಜೆ ನಡೆಯಲಿದ್ದು, ಸಂಜೆ ದೀಪ ಪ್ರಜ್ವಲನದೊಂದಿಗೆ ಶಿವರಾತ್ರಿ ವಿಶೇಷ ಆಚರಣೆಗಳು ಮುಕ್ತಾಯಗೊಳ್ಳಲಿವೆ. “ದೀಪಂ ಪಾಪನಾಶಂ” ಎಂಬ ಉಕ್ತಿಯಂತೆ, ಶಿವರಾತ್ರಿಯಲ್ಲಿ ದೀಪ ಹಚ್ಚುವ ವಿಶಿಷ್ಟ ಸಂಪ್ರದಾಯವನ್ನು ಸ್ಥಳೀಯ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲಿಸುತ್ತಾರೆ.
ಇದೇ ಸಂದರ್ಭದಲ್ಲಿ, ಯಾವ ಲೋಹದಿಂದ ನಿರ್ಮಿತವಾಗಿದೆ ಎಂಬುದು ಇಂದಿಗೂ ತಜ್ಞರು ಹಾಗೂ ವಿಜ್ಞಾನಿಗಳಿಗೆ ಸವಾಲಾಗಿರುವ ತ್ರಿಶೂಲಕ್ಕೆ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಲಾಗುವುದು. ಈ ವಿಶಿಷ್ಟ ಆಚರಣೆಗಳನ್ನು ಕಣ್ತುಂಬಿಕೊಳ್ಳಲು ಹಾಗೂ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಲು ಪ್ರತಿವರ್ಷದಂತೆ ಈ ಬಾರಿ ಕೂಡ ಸಹಸ್ರಾರು ಭಕ್ತರು ಕೊಡಚಾದ್ರಿಗೆ ಆಗಮಿಸುವ ನಿರೀಕ್ಷೆಯಿದೆ.
ಸ್ಥಳೀಯ ಗ್ರಾಮಸ್ಥರು ಹಾಗೂ ದೇವಾಲಯದ ಆಡಳಿತ ಸಮಿತಿ ಭಕ್ತರ ಅನುಕೂಲಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿವರಾತ್ರಿಯ ಪುಣ್ಯಫಲ ಪಡೆಯುವಂತೆ ಮನವಿ ಮಾಡಲಾಗಿದೆ.
Повторяем попытку...
Доступные форматы для скачивания:
Скачать видео
-
Информация по загрузке: