ಕೊಪ್ಪಳ, ಫೆಬ್ರವರಿ 27:ಆಶಾ ಕಾರ್ಯಕರ್ತೆಯರ ಭರವಸೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಬೃಹತ್
Автор: @gKarnataka Power tv
Загружено: 2026-03-02
Просмотров: 174
Описание:
gkarnatakapowertv//28//02//2026//#@
ಕೊಪ್ಪಳ, ಫೆಬ್ರವರಿ 27:
ಆಶಾ ಕಾರ್ಯಕರ್ತೆಯರ ಭರವಸೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಕೊಪ್ಪಳ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ನಗರದ ಈಶ್ವರ ಪಾರ್ಕಿನಿಂದ ಬಸವೇಶ್ವರ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಮಾತನಾಡಿ, 2025ರ ಜನವರಿಯಲ್ಲಿ ನಡೆದ ಅಹೋರಾತ್ರಿ ಹೋರಾಟದ ವೇಳೆ ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದ ಗೌರವಧನ ಹೆಚ್ಚಳ ಹಾಗೂ ಮಾಸಿಕ ಕನಿಷ್ಠ ರೂ.10,000 ಗ್ಯಾರಂಟಿ ಭರವಸೆ 14 ತಿಂಗಳು ಕಳೆದರೂ ಈಡೇರಿಲ್ಲ ಎಂದು ಕಟುವಾಗಿ ಟೀಕಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ರೂ.5,000 ಗೌರವಧನವನ್ನು ರೂ.8,000ಕ್ಕೆ ಹೆಚ್ಚಿಸುವುದನ್ನೂ ಸರ್ಕಾರ ಜಾರಿಗೆ ತರದೆ ಆಶಾ ಕಾರ್ಯಕರ್ತೆಯರನ್ನು ವಂಚಿಸಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್ ಮಾತನಾಡಿ, ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಏಕಪಕ್ಷೀಯ ಆದೇಶಗಳನ್ನು ಹೊರಡಿಸಿ ಆಶಾ ಕಾರ್ಯಕರ್ತೆಯರ ಬದುಕಿನ ಮೇಲೆ ಹೊಡೆತ ನೀಡಲಾಗುತ್ತಿದೆ. ಹತ್ತು ವರ್ಷ ಸೇವೆ ಸಲ್ಲಿಸಿದ ಆಶಾ ಸುಗಮಕಾರರನ್ನು ಕೈಬಿಡುವ ಕ್ರಮ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷೆ ಶೋಭಾ ಹೂಗಾರ್ ನಿರೂಪಣೆ ಮಾಡಿದರು. ಜಿಲ್ಲಾ ಮುಖಂಡರಾದ ಗಾಯತ್ರಿ, ರೇಣುಕಾ, ಅನ್ನಪೂರ್ಣ, ಶಿವಮ್ಮ, ಜ್ಯೋತಿ, ಲಕ್ಷ್ಮಿ, ತಿಪ್ಪಮ್ಮ, ದೀಪ, ಅಮರಮ್ಮ, ಶಬನಾ, ಶಾರದಾ, ಲಲಿತ, ಸಂಗೀತ, ಶರಣಮ್ಮ, ರಜಿಯಾ ಬೇಗಂ, ಗಂಗಮ್ಮ, ಹನುಮಕ್ಕ, ದೇವಕ್ಕ, ನೀಲಮ್ಮ, ಮಹಾದೇವಿ, ಭಾಗ್ಯ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕಳೆದ ನಾಲ್ಕು ತಿಂಗಳ ಬಾಕಿ ಪ್ರೋತ್ಸಾಹಧನ ಪಾವತಿ, ಪ್ರತೀ ತಿಂಗಳು ನಿಗದಿತ ದಿನಾಂಕದೊಳಗೆ ಗೌರವಧನ ಹಾಗೂ ಪ್ರೋತ್ಸಾಹಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
@gkarnatakapowertv
@gk
Повторяем попытку...
Доступные форматы для скачивания:
Скачать видео
-
Информация по загрузке: