ಕೋತಿಗಳಿಗೆ ಚಾಲೆಂಜ್ ಮಾಡಿದ ಕೃಷಿಕ..! | ತೆಂಗಿನ ಎಳನೀರನ್ನು ಉಳಿಸಿದ ಗೋಪಾಲಕೃಷ್ಣ ಭಟ್ ಅವರ ಬುದ್ಧಿವಂತಿಕೆ.
Автор: News Pad
Загружено: 2026-03-06
Просмотров: 6205
Описание:
ಕಡಬ ತಾಲೂಕಿನ ಅಲಂಗಾರು ಗ್ರಾಮದ ಮನವಳಿಕೆ ನಿವಾಸಿ ಕೃಷಿಕ ಗೋಪಾಲಕೃಷ್ಣ ಭಟ್ ಅವರು ತಮ್ಮದೇ ಬುದ್ಧಿವಂತಿಕೆಯಿಂದ ಕೋತಿಗಳ ಉಪಟಳಕ್ಕೆ ಹೊಸ ಪರಿಹಾರ ಕಂಡುಕೊಂಡಿದ್ದಾರೆ.
ಕಡಬ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಭಾಗದಲ್ಲಿ ತೆಂಗಿನ ತೋಟಗಳಿಗೆ ಕೋತಿಗಳ ಕಾಟ ಹೆಚ್ಚಾಗಿದ್ದು, ತೆಂಗಿನ ಮರದಲ್ಲಿ ಎಳನೀರು ಬಂದ ಕೂಡಲೇ ಕೋತಿಗಳು ಬಂದು ಸಂಪೂರ್ಣ ತೆಂಗಿನಕಾಯಿಗಳನ್ನು ಹಾನಿಗೊಳಿಸುತ್ತಿದ್ದವು. ಇದರಿಂದ ರೈತರಿಗೆ ದೊಡ್ಡ ನಷ್ಟವಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗೋಪಾಲಕೃಷ್ಣ ಭಟ್ ಅವರು ತೆಂಗಿನ ಮರದಲ್ಲಿರುವ ಎಳೆಯ ಕಾಯಿಗಳಿಗೆ ಕೋಳಿ ಮೇಷ್ (ಬಲೆ) ಅಳವಡಿಸುವ ಹೊಸ ಉಪಾಯವನ್ನು ಕಂಡುಹಿಡಿದಿದ್ದಾರೆ. ಈ ಬಲೆ ಅಳವಡಿಸಿದ ನಂತರ ಕೋತಿಗಳು ತೆಂಗಿನಕಾಯಿಯನ್ನು ತಿನ್ನಲು ಸಾಧ್ಯವಾಗುವುದಿಲ್ಲ.
ಇದರಿಂದ
ಕೋತಿಗಳಿಂದ ತೆಂಗಿನಕಾಯಿಗೆ ಹಾನಿಯಾಗುವುದಿಲ್ಲ
ಎಳನೀರು ಸಂಪೂರ್ಣ ಉಳಿಯುತ್ತದೆ
ಒಣ ತೆಂಗಿನಕಾಯಿ ಕೆಳಗೆ ಬಿದ್ದು ನಷ್ಟವಾಗುವುದಿಲ್ಲ
ಹಂದಿಗಳಿಂದ ಆಗುವ ಹಾನಿಯೂ ಕಡಿಮೆಯಾಗುತ್ತದೆ
ಸುಮಾರು ಮೂರು ತಿಂಗಳ ಹಿಂದೆ ಕುಕ್ಕೆಸುಬ್ರಹ್ಮಣ್ಯದ ಕೃಷಿಕ ವೆಂಕಟೇಶ್ ಭಟ್ ಅವರ ತೋಟದಲ್ಲಿ ಸುಮಾರು 150 ತೆಂಗಿನ ಎಳೆಯ ಕಾಯಿಗಳಿಗೆ ಈ ಬಲೆಯನ್ನು ಅಳವಡಿಸಲಾಗಿದ್ದು, ಈಗಾಗಲೇ ಸುಮಾರು 500 ಎಳನೀರನ್ನು ಕೊಯ್ದು ಮಾರಾಟ ಮಾಡಿದ್ದಾರೆ.
ಈ ವಿಧಾನದಿಂದ ಯಾವುದೇ ಪ್ರಾಣಿಗಳಿಗೆ ಹಾನಿಯಾಗುವುದಿಲ್ಲ ಎಂದು ಗೋಪಾಲಕೃಷ್ಣ ಭಟ್ ಅವರು ತಿಳಿಸಿದ್ದಾರೆ.
ಈ ಬಲೆಯನ್ನು ಹೇಗೆ ಅಳವಡಿಸಬೇಕು, ಎಷ್ಟು ಖರ್ಚು ಬರುತ್ತದೆ ಹಾಗೂ ರೈತರಿಗೆ ಬೇಕಾದಲ್ಲಿ ಗೋಪಾಲಕೃಷ್ಣ ಭಟ್ ಹಾಗೂ ಅವರ ತಂಡ ಬಂದು ಬಲೆ ಅಳವಡಿಸಿ ನೀಡುತ್ತಾರೆ.
ರೈತರಿಗೆ ಉಪಯೋಗವಾಗುವ ಈ ಹೊಸ ಉಪಾಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.
#Kadaba
#CoconutFarm
#FarmerInnovation
#MonkeyProblem
#CoconutFarming
#DakshinaKannada
#Agriculture
#FarmersIdea
#KarnatakaFarmers
#CoconutTree
Повторяем попытку...
Доступные форматы для скачивания:
Скачать видео
-
Информация по загрузке: